ADVERTISEMENT

ಹಿಂದಿ ವಾಕ್ಯ ಅಳಿಸಿದ ಕರವೇ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 17:46 IST
Last Updated 6 ಆಗಸ್ಟ್ 2020, 17:46 IST
‘ಕಾಯಕ್‌ ಹಿ ಕೈಲಾಸ್’ ಎಂದು ಹಿಂದಿಯಲ್ಲಿ ಬರೆದಿರುವುದು 
‘ಕಾಯಕ್‌ ಹಿ ಕೈಲಾಸ್’ ಎಂದು ಹಿಂದಿಯಲ್ಲಿ ಬರೆದಿರುವುದು    

ಬೆಂಗಳೂರು: ಚಾಲುಕ್ಯ ವೃತ್ತದಲ್ಲಿ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿರುವ ಬಸವಣ್ಣನವರ ಪುತ್ಥಳಿ ಹಿಂದಿನ ಮಂಟಪದ ಮೇಲೆ ಹಿಂದಿಯಲ್ಲಿ ಬರೆದಿದ್ದ ವಾಕ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ನಸುಕಿನ ಜಾವ ತೆಗೆದು ಹಾಕಿದ್ದಾರೆ.

‘ಪುತ್ಥಳಿಯ ಹಿಂದೆ ಕಾಯಕವೇ ಕೈಲಾಸ ಎನ್ನುವುದನ್ನು ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಬರೆಯಲಾಗಿತ್ತು. ‘ಕಾಯಕ್‌ ಹಿ ಕೈಲಾಸ್‌’’ ಎಂಬ ಸಾಲು ತೆಗೆಯಬೇಕು, ಹಿಂದಿ ಹೇರಿಕೆಗೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರು ಮತ್ತು ಮೇಯರ್‌ ಅವರಿಗೆ ಮನವಿ ಮಾಡಿದ್ದೆವು. ಆದರೆ, ಸ್ಪಂದಿಸಲಿಲ್ಲ. ಅದಕ್ಕೆ ನಾವೇ ಆ ವಾಕ್ಯವನ್ನು ತೆಗೆಯಬೇಕಾಯಿತು’ ಎಂದು ಕರವೇ ಪದ್ಮನಾಭನಗರ ಕ್ಷೇತ್ರ ಘಟಕದ ಅಧ್ಯಕ್ಷ ಮನು ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT