ADVERTISEMENT

ಜಲ ಋಷಿ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 21:59 IST
Last Updated 4 ಜುಲೈ 2020, 21:59 IST

ಬೆಂಗಳೂರು: ಜಲಸಂರಕ್ಷಣೆ ಕೈಗೊಳ್ಳಲು ಗ್ರಾಹಕರನ್ನು ಉತ್ತೇಜಿಸುವ ಸಲುವಾಗಿ ಜಲಮಂಡಳಿ ನೀಡುತ್ತಿರುವ ‘ಜಲ ಋಷಿ’ ಪುರಸ್ಕಾರಕ್ಕೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಜು.31ರವರೆಗೆ ವಿಸ್ತರಿಸಲಾಗಿದೆ.

ಗ್ರಾಹಕರು ಕೈಗೊಂಡಿರುವ ಮಳೆನೀರು ಸಂಗ್ರಹ ವ್ಯವಸ್ಥೆ, ನೀರಿನ ಸದ್ಬಳಕೆ ಹಾಗೂ ವಾಣಿಜ್ಯ ಕಟ್ಟಡಗಳು, ಹೋಟೆಲ್‌ಗಳು, ಉಪಾಹಾರದರ್ಶಿನಿಗಳು, ಕೈಗಾರಿಕೆಗಳು, ಸರ್ಕಾರಿ ಕಟ್ಟಡಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ ಮುಂತಾದ ನೀರಿನ ಸಂರಕ್ಷಣಾ ಕ್ರಮಗಳನ್ನು ಗುರುತಿಸಿ ಜಲಮಂಡಳಿ ಈ ಪುರಸ್ಕಾರ ನೀಡಲಿದೆ.

ಮಾಹಿತಿಗಾಗಿ ಜಲಮಂಡಳಿಯ ವೆಬ್‌ಸೈಟ್‌ www.bwssb.gov.in ನೋಡಬಹುದು ಅಥವಾ http:/49.50.101.196:82/. ಈ ಲಿಂಕ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ADVERTISEMENT

ಸಂಪರ್ಕ: 080 22945114

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.