ADVERTISEMENT

ಅಪಪ್ರಚಾರವೇ ಹಿನ್ನಡೆಗೆ ಕಾರಣ: ಟಿ.ಎ. ಶರವಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 16:16 IST
Last Updated 2 ನವೆಂಬರ್ 2021, 16:16 IST
ಟಿ.ಎ.ಶರವಣ
ಟಿ.ಎ.ಶರವಣ   

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ನಡೆಸಿದ ಅಪಪ್ರಚಾರವೇ ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಹಿನ್ನಡೆಗೆ ಕಾರಣ ಎಂದು ಜೆಡಿಎಸ್‌ ವಕ್ತಾರ ಟಿ.ಎ. ಶರವಣ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಎರಡು ಕ್ಷೇತ್ರಗಳ ಫಲಿತಾಂಶದಿಂದ ಜೆಡಿಎಸ್‌ ಪಕ್ಷದ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ಜನ ಕೊಟ್ಟಿರುವ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಹಣದ ಬಲ, ಅಧಿಕಾರದ ಬಲ ಬಳಸಿ ಗೆದ್ದಿವೆ’ ಎಂದಿದ್ದಾರೆ.

ಈ ಫಲಿತಾಂಶದಿಂದ ಜೆಡಿಎಸ್‌ ಧೈರ್ಯ ಕಳೆದುಕೊಳ್ಳುವುದಿಲ್ಲ. ಜನಪರ ರಾಜಕಾರಣ ಮುಂದುವರಿಯಲಿದೆ. ಅನೈತಿಕ ರಾಜಕಾರಣವನ್ನು ತಮ್ಮ ಪಕ್ಷ ಮಾಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ, ಕಾಂಗ್ರೆಸ್‌ ಬಣ್ಣ ಬಯಲಾಗಲಿದೆ. ಜನದ್ರೋಹಿ ರಾಜಕಾರಣವನ್ನು ಮೀರಿ ಜೆಡಿಎಸ್‌ ಎದ್ದು ಬರಲಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.