ಬೆಂಗಳೂರು: ಸಂಸದತೇಜಸ್ವಿ ಸೂರ್ಯ ಅವರ ‘ಸಂಸದ್ ಉದ್ಯೋಗ ಮಿತ್ರ’ ಕಾರ್ಯಕ್ರಮದಡಿ ‘ಬೃಹತ್ ಉದ್ಯೋಗ ಮೇಳ’ವನ್ನು ಇದೇ 28ರಂದು (ಭಾನುವಾರ) ಬೆಳಿಗ್ಗೆ 9.30ರಿಂದ ಬಿಟಿಎಂ ಬಡಾವಣೆಯ ಶಾಂತಿನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ.
ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿಪಿ.ರಿಚರ್ಡ್, ಕೂ ಸಂಸ್ಥೆಯಅಪ್ರಮೇಯ,ಪ್ರಾಕ್ಟೊ ಸಂಸ್ಥೆಯ ಎನ್.ಡಿ.ಶಶಾಂಕ್, ಜೆಟುಡಬ್ಲ್ಯು ಸಂಸ್ಥೆಯಪ್ರೀತಿ ಸಾವಂತ್ ಭಾಗವಹಿಸಲಿದ್ದಾರೆ.
50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಳಾಸ:ಶಾಂತಿನಿಕೇತನ ಸ್ಕೂಲ್, ವೈಶ್ಯ ಬ್ಯಾಂಕ್ ಕಾಲೊನಿ, ಬಿಟಿಎಂ ಬಡಾವಣೆ 2ನೇ ಹಂತ.
ಸಂಪರ್ಕ:9916844844
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.