ADVERTISEMENT

ಕಗ್ಗಲೀಪುರ: ಅರಣ್ಯ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 20:32 IST
Last Updated 24 ಮಾರ್ಚ್ 2023, 20:32 IST
ಕಗ್ಗಲಿಪುರ ವ್ಯಾಪ್ತಿಯ ಬಿ.ಎಂ. ಕಾವಲ್‌ನಲ್ಲಿ  ಒತ್ತುವರಿ ಪ್ರದೇಶವನ್ನು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು
ಕಗ್ಗಲಿಪುರ ವ್ಯಾಪ್ತಿಯ ಬಿ.ಎಂ. ಕಾವಲ್‌ನಲ್ಲಿ  ಒತ್ತುವರಿ ಪ್ರದೇಶವನ್ನು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು   

ಬೆಂಗಳೂರು: ಕಗ್ಗಲಿಪುರ ವ್ಯಾಪ್ತಿಯ ಬಿ.ಎಂ. ಕಾವಲ್‌ನಲ್ಲಿ 9 ಎಕರೆ 20 ಗುಂಟೆ ಒತ್ತುವರಿ ಪ್ರದೇಶವನ್ನು ರಾಜ್ಯ ಅರಣ್ಯ ಇಲಾಖೆ ತೆರವುಗೊಳಿಸಿದೆ.

ಭುವನ ಕಂಫರ್ಟ್ಸ್‌ ರಿಲೇಟರ್‌ನಿಂದ 6 ಎಕರೆ 18 ಗುಂಟೆ ಹಾಗೂ ಖೋಡೇಸ್‌ ಗ್ರೂಪ್‌ ವತಿಯಿಂದ 3 ಎಕರೆ 2 ಗುಂಟೆ ಅರಣ್ಯ ಪ್ರದೇಶ ಒತ್ತುವರಿ
ಯಾಗಿತ್ತು. ಬೆಂಗಳೂರು ದಕ್ಷಿಣದ ಎಸಿಎಫ್‌, ಕಗ್ಗಲಿಪುರ ಆರ್‌ಎಫ್‌ಒ, ಉತ್ತರಹಳ್ಳಿ ಡಿಆರ್‌ಎಫ್‌ಒ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT