ADVERTISEMENT

ಕ್ರೈಸ್ತ ಸಂಸ್ಥೆಗೆ ಕಾಂತರಾಜು ವರದಿ ಸೋರಿಕೆ: ಪ್ರಶಾಂತ್ ಸಂಬರಗಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 15:48 IST
Last Updated 1 ಸೆಪ್ಟೆಂಬರ್ 2023, 15:48 IST
ಪ್ರಶಾಂತ್ ಸಂಬರಗಿ
ಪ್ರಶಾಂತ್ ಸಂಬರಗಿ   

ಬೆಂಗಳೂರು: ‘ಜೋಶುವಾ ಪ್ರಾಜೆಕ್ಟ್‌ ಎಂಬ ಕ್ರೈಸ್ತ ಸಂಸ್ಥೆಗೆ ಎಚ್‌. ಕಾಂತರಾಜು ಆಯೋಗದ ವರದಿಯು ಸೋರಿಕೆಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ ಈ ಸಂಸ್ಥೆಯು ಬೇರೆ ಧರ್ಮದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ, ಮುಖ್ಯಮಂತ್ರಿ ಅವರು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಜೋಶುವಾ ಪ್ರಾಜೆಕ್ಟ್‌ ಮತ್ತು ಅನೇಕ ಸಂಸ್ಥೆಗಳು ಹಿಂದೂ ಧರ್ಮ ಮತ್ತು ಮಠಗಳ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿವೆ. ಇವರಿಗೆ ವಿದೇಶಗಳಿಂದ ಹಣ ಪೂರೈಕೆ ಮಾಡುತ್ತಿದ್ದು, ಹಿಂದೂ ಧರ್ಮಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.