ಬೆಂಗಳೂರು: ‘ಅಧಿಕಾರದಲ್ಲಿ ಇದ್ದವರನ್ನು ಹೊಗಳಿ ಸರ್ವಾಧಿಕಾರಿ ಮಾಡುವ ಭಟ್ಟಂಗಿತನವೇ ಭಾರತದ ಬಹುದೊಡ್ಡ ಕಾಯಿಲೆ’ ಎಂದು ಚಿಂತಕ ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಈಚೆಗೆ ಬಿಎಂಎಸ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ‘ಲಂಕೇಶರ ನಾಟಕಗಳು: ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಧಿಕಾರದಲ್ಲಿ ಇದ್ದವರನ್ನು ಹೊಗಳುತ್ತಾ ಹೋದರೆ, ಅವರು ಸರ್ವಾಧಿಕಾರಿಯಾಗಿ ಪರಿವರ್ತನೆಯಾಗುತ್ತಾರೆ. ಒಮ್ಮೆ ಸರ್ವಾಧಿಕಾರಿಯಾಗಿ ಬೆಳೆದರೆ ಅವರಿಂದ ಅಪಾಯವೇ ಹೆಚ್ಚು. ಆದ್ದರಿಂದ ಹೊಗಳಿಕೆ ಕಾಯಿಲೆಯಿಂದ ಭಾರತೀಯರು ಹೊರಬರಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.