ADVERTISEMENT

ನಿತ್ಯ 2500 ದಿನಗೂಲಿ ಕಾರ್ಮಿಕರಿಗೆ ಊಟ

​ಪ್ರಜಾವಾಣಿ ವಾರ್ತೆ
Published 19 ಮೇ 2021, 20:00 IST
Last Updated 19 ಮೇ 2021, 20:00 IST
ಬಸವನಪುರ ವಾರ್ಡ್ ಪಾಲಿಕೆ ಮಾಜಿ ಸದಸ್ಯ ಬಿ.ಎನ್.ಜಯಪ್ರಕಾಶ್ ದಿನಗೂಲಿ ಕಾರ್ಮಿಕರಿಗೆ ಊಟ ವಿತರಿಸಿದರು.
ಬಸವನಪುರ ವಾರ್ಡ್ ಪಾಲಿಕೆ ಮಾಜಿ ಸದಸ್ಯ ಬಿ.ಎನ್.ಜಯಪ್ರಕಾಶ್ ದಿನಗೂಲಿ ಕಾರ್ಮಿಕರಿಗೆ ಊಟ ವಿತರಿಸಿದರು.   

ಕೆ.ಆರ್.ಪುರ: ‘ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎನ್ನುವ ದೃಷ್ಟಿಯಿಂದ ದಿನನಿತ್ಯ 2,500 ಕ್ಕೂ ಹೆಚ್ಚು ಜನರಿಗೆ ಊಟ ವಿತರಿಸಲಾಗುತ್ತಿದೆ‘ ಎಂದು ಪಾಲಿಕೆಮಾಜಿ ಸದಸ್ಯ ಬಿ.ಎನ್.ಜಯಪ್ರಕಾಶ್ ಹೇಳಿದರು.

ಬಸವನಪುರ ವಾರ್ಡ್‌ನ ಚಿಕ್ಕ ದೇವಸಂದ್ರ, ಸಿಗೇಹಳ್ಳಿ, ಪ್ರಿಯಾಂಕನಗರ, ಸ್ವಾತಂತ್ರ್ಯನಗರ ಮುಂತಾದ ಕಡೆಗಳಲ್ಲಿ ವಲಸೆ ಕಾರ್ಮಿಕರಿಗೆ ಊಟ ವಿತರಿಸಿ ಮಾತನಾಡಿದರು.

’ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು ಇರುವ ಸ್ಥಳಕ್ಕೆ ತೆರಳಿ ಊಟ ಪೊಟ್ಟಣ ಗಳನ್ನು ವಿತರಣೆ ಮಾಡಲಾಗುತ್ತಿದ್ದು ಲಾಕ್ ಡೌನ್ ಮುಗಿಯುವವರೆಗೂ ನಮ್ಮ ಸೇವಾ ಕಾರ್ಯ ಮುಂದುವರಿಯುತ್ತದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.