ADVERTISEMENT

‘ಭಾರತ ಪ್ರಕಾಶಿಸುತ್ತಿದೆ- ಹಾಸ್ಯಾಸ್ಪದ’

ಎಲ್‌.ಹನುಮಂತಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:40 IST
Last Updated 22 ಮೇ 2019, 19:40 IST
ಎಲ್‌.ಹನುಮಂತಯ್ಯ ಅವರು ಪುಸ್ತಕ ಬಿಡುಗಡೆ ಮಾಡಿ, ಅದರ ಪ್ರತಿಯನ್ನು ಲೇಖಕಿ ಸುಮಿತ್ರಾ ಮಾ ದುರ್ಗಿ ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಶಂಶೀರ್ ಖಾನ್, ಗುರು ತಿಗಡಿ, ವಿ.ಟಿ ವೆಂಕಟೇಶಯ್ಯ, ಲೀಲಾವತಿ, ಕೆ.ಕೃಷ್ಣಪ್ಪ ಇದ್ದಾರೆ–ಪ್ರಜಾವಾಣಿ ಚಿತ್ರ
ಎಲ್‌.ಹನುಮಂತಯ್ಯ ಅವರು ಪುಸ್ತಕ ಬಿಡುಗಡೆ ಮಾಡಿ, ಅದರ ಪ್ರತಿಯನ್ನು ಲೇಖಕಿ ಸುಮಿತ್ರಾ ಮಾ ದುರ್ಗಿ ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಶಂಶೀರ್ ಖಾನ್, ಗುರು ತಿಗಡಿ, ವಿ.ಟಿ ವೆಂಕಟೇಶಯ್ಯ, ಲೀಲಾವತಿ, ಕೆ.ಕೃಷ್ಣಪ್ಪ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವಾಗ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳುವುದು ಹಾಸ್ಯಾಸ್ಪದ’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸರ್ಕಾರಿ ಶಿಕ್ಷಕರಸಂಘಗಳ ಒಕ್ಕೂಟ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸಾವಿತ್ರಿ
ಬಾಯಿ ಫುಲೆ ಅವರ ಸಾಧನೆ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೇದಗಳ ಕಾಲದಿಂದಲೂದಲಿತರು ಮತ್ತು ಮಹಿಳೆಯರನ್ನು ಶೋಷಿಸಿದ ಭಾರತವನ್ನು ಭವ್ಯ ಪರಂಪರೆಯ ನಾಡು ಎಂದು ಹೇಗೆ ಕರೆಯುವುದು.ನಮ್ಮ ಚರಿತ್ರೆ ಸುಳ್ಳಿನ ಕಂತೆ. ಶಿಕ್ಷಕರು ಇತಿಹಾಸ ಬೋಧಿಸುವಾಗ ಚರಿತ್ರೆಯ ಪೊಳ್ಳುಗಳನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಡಬೇಕು’ ಎಂದು ಹೇಳಿದರು.

ADVERTISEMENT

‘ಆಮ್‌ ಆದ್ಮಿ ಪಕ್ಷ ಅಸ್ತಿತ್ವದಲ್ಲಿರುವ ದೆಹಲಿಯಲ್ಲಿಶಿಕ್ಷಣ ವ್ಯವಸ್ಥೆ ತುಂಬಾ ಸುಧಾರಿಸಿದೆ. ಇದನ್ನು ಇತರೆ ರಾಜ್ಯಗಳು ಅನುಸರಿಸಬೇಕು. ನಾವು ಅಳವಡಿಸಿಕೊಳ್ಳಬೇಕು. ರಾಜ್ಯದಗ್ರಾಮೀಣ ಭಾಗದಲ್ಲಿ
ಸರ್ಕಾರಿ ಶಾಲೆಗಳು ಸಮಸ್ಯೆಗಳಿಂದ ನರಳುತ್ತಿವೆ. ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿ.ಟಿ.ವೆಂಕಟೇಶಯ್ಯ ಮಾತನಾಡಿ,‘ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಪುಸ್ತಕ ಪ್ರಕಟಿಸಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ಶಾಲೆಗಳು ಈ ಪುಸ್ತಕವನ್ನು ಖರೀದಿಸಲು ಮುಂದಾಗಿವೆ’ ಎಂದರು.

‘ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಹೆಚ್ಚಿದೆ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.