ADVERTISEMENT

ಮಹಾಬಲೇಶ್ವರ ಸ್ವಾಮಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 22:05 IST
Last Updated 11 ಮಾರ್ಚ್ 2021, 22:05 IST
ಮಹಾಬಲೇಶ್ವರಸ್ವಾಮಿಗೆ ನಡೆಸಿದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಎಂ.ಎ.ಮಹಮ್ಮದ್, ಪಾಲಿಕೆ ಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ದೇವಸ್ಥಾನದ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ರಾಜು, ಹರಿನಾಥ್ ರೆಡ್ಡಿ, ಅಮರ ಜ್ಯೋತಿ ಮೋಹನ್, ಶಿವಪ್ಪ, ರವಿಕುಮಾರ್, ಕೆ.ಪಿ.ಕೃಷ್ಣ ಇದ್ದರು.
ಮಹಾಬಲೇಶ್ವರಸ್ವಾಮಿಗೆ ನಡೆಸಿದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಎಂ.ಎ.ಮಹಮ್ಮದ್, ಪಾಲಿಕೆ ಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ದೇವಸ್ಥಾನದ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ರಾಜು, ಹರಿನಾಥ್ ರೆಡ್ಡಿ, ಅಮರ ಜ್ಯೋತಿ ಮೋಹನ್, ಶಿವಪ್ಪ, ರವಿಕುಮಾರ್, ಕೆ.ಪಿ.ಕೃಷ್ಣ ಇದ್ದರು.   

ಕೆ.ಆರ್.ಪುರ: ಮಹಾ ಶಿವರಾತ್ರಿ ಪ್ರಯುಕ್ತ ವೆಂಗಯ್ಯನ ಕೆರೆ ಬಳಿ ಇರುವ ಮಹಾಬಲೇಶ್ವರ ಮತ್ತು ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ಬೆಳಿಗ್ಗೆ 4 ಗಂಟೆಯಿಂದ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕದೊಂದಿಗೆ ಮಹಾ ಶಿವರಾತ್ರಿ ಕಾರ್ಯಕ್ರಮ ಆರಂಭಗೊಂಡಿತು. ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ‌ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.

ಪ್ರಮುಖ ಆಕರ್ಷಕವಾದ ಗುಹಾಂತರ ದ್ವಾರದ ಹನ್ನೆರಡು ಜ್ಯೋತಿರ್ಲಿಂಗ ದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಜ್ಯೋತಿರ್ಲಿಂಗಗಳು ಆಕರ್ಷಕವಾಗಿ ಕಾಣಲು ಕಣ್ಮನ ಸೆಳೆಯಲು ವಿದ್ಯುತ್ ದ್ವೀಪದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಕೆ.ಆರ್.ಪುರ ಸುತ್ತಮುತ್ತಲಿನ ಆನಂದಪುರ, ಮೇಡಹಳ್ಳಿ, ಭಟ್ಟರಹಳ್ಳಿ, ಅವಲಹಳ್ಳಿ, ಬಸವನಪುರ, ಮಹದೇವಪುರ, ದೇವಸಂದ್ರ, ರಾಮಮೂರ್ತಿನಗರ, ಐಟಿಐ ಕಾಲೋನಿ, ಮರಗೊಂಡಹಳ್ಳಿ, ಟಿ.ಸಿ.ಪಾಳ್ಯ ಮುಂತಾದ ಕಡೆಗಳಿಂದ ಬಂದ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

ಮಹಾ ಶಿವರಾತ್ರಿ ಹಬ್ಬದಂದು ಭಕ್ತರ ಇಷ್ಟಾರ್ಥ ಈಡೇರಲು ವಿಶೇಷ ಪೂಜೆ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆ.ಆರ್.ಪುರ ಗ್ರಾಮಸ್ಥರ ಸಮ್ಮುಖದಲ್ಲಿ ಗುಹಾಂತರ ದ್ವಾರದ ಹನ್ನೆರಡು ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ದೇವಸ್ಥಾನ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.