ADVERTISEMENT

ನಾಲ್ಕೂವರೆ ಕೆ.ಜಿ ಚಿನ್ನ ಸಮೇತ ತಯಾರಕ ಪರಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 19:03 IST
Last Updated 10 ಜೂನ್ 2020, 19:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲ್ಲರಿ ಮಳಿಗೆ ಮಾಲೀಕನನ್ನು ನಂಬಿಸಿದ ಆಭರಣ ತಯಾರಕ 4.5 ಕೆ.ಜಿ. ಚಿನ್ನ ಸಹಿತಪರಾರಿಯಾಗಿದ್ದಾನೆ.

ಆರ್.ಎಂ.ವಿ. ಲೇಔಟ್ ನಿವಾಸಿ ಸುನೀಲ್ ಕುಮಾರ್ ವಂಚನೆಗೊಳಗಾದವರು. ಸುರೇಶ್ ಆಚಾರಿ ಎಂಬಾತನ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐದು ವರ್ಷಗಳಿಂದ ಗಾಂಧಿನಗರದ 5ನೇ ಕ್ರಾಸ್‌ನಲ್ಲಿ ಸುನೀಲ್‌ ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. ಅದೇ ಕಟ್ಟಡದ ಕೊಠಡಿಯೊಂದರಲ್ಲಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ ಸುರೇಶ್‌, ಸುನೀಲ್‌ಗೆ ಸಂಬಂಧಿಸಿದ ಆಭರಣಗಳನ್ನು ತಯಾರಿಸಿ ಕೊಡುತ್ತಿದ್ದ.

ADVERTISEMENT

2018ರಲ್ಲಿ ಅಂಗಡಿ ಮುಚ್ಚಿ ಹೋಗಿದ್ದ ಸುರೇಶ್, ಮತ್ತೆ ಬಂದು ಕೆಲಸ ಮಾಡಿಕೊಡುವುದಾಗಿ ಹೇಳಿದ್ದ. ಇದನ್ನು ನಂಬಿ ಸುನೀಲ್‌ 10 ಕೆ.ಜಿ. ಚಿನ್ನದ ಬಿಸ್ಕತ್ತು ನೀಡಿದ್ದರು. ಅದರಲ್ಲಿ 5.5 ಕೆ.ಜಿ. ಚಿನ್ನಾಭರಣ ತಯಾರಿಸಿಕೊಟ್ಟಿದ್ದ ಸುರೇಶ್, ಬಳಿಕ ನಾಪತ್ತೆಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.