ADVERTISEMENT

ಎನ್. ಲೋಕೇಶ್ ಉಚ್ಚಾಟನೆಗೆ ಶಾಸಕ ಎಸ್. ಮುನಿರಾಜು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2023, 20:39 IST
Last Updated 17 ಮೇ 2023, 20:39 IST
ಎಸ್. ಮುನಿರಾಜು
ಎಸ್. ಮುನಿರಾಜು   

ಪೀಣ್ಯ ದಾಸರಹಳ್ಳಿ: ‘ಪಕ್ಷಕ್ಕೆ ದ್ರೋಹ ಎಸಗಿ ಜೆಡಿಎಸ್ ಪರ ಪ್ರಚಾರ ಮಾಡಿರುವ ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್. ಲೋಕೇಶ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು’ ಎಂದು ಶಾಸಕ ಎಸ್. ಮುನಿರಾಜು ಆಗ್ರಹಿಸಿದರು.

ಬಾಗಲಗುಂಟೆಯ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು.

‘ಸಾಮಾನ್ಯ ಕಾರ್ಯಕರ್ತನಾಗಿದ್ದ ಲೋಕೇಶ್ ಅವರನ್ನು ಮಲ್ಲಸಂದ್ರ ವಾರ್ಡ್ ಅಧ್ಯಕ್ಷ, ಪಾಲಿಕೆ ಸದಸ್ಯ, ಕ್ಷೇತ್ರದ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಲಾಯಿತು. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡಿದ್ದು ಬಿಜೆಪಿ ಪಕ್ಷ’ ಎಂದು ವಿವರಿಸಿದರು.

ADVERTISEMENT

‘ಇಷ್ಟೆಲ್ಲ ಅಧಿಕಾರದ ಅವಕಾಶ ನೀಡಿದ್ದರೂ ದಾಸರಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ತಾನು ಸಿದ್ಧ ಮಾಡಿಕೊಂಡಿದ್ದ ಪ್ರಚಾರದ ವಾಹನವನ್ನು ಜೆಡಿಎಸ್ ಅಭ್ಯರ್ಥಿ ಮಂಜುನಾಥ್‌ಗೆ ನೀಡಿ ತನ್ನ ಬೆಂಬಲಿಗರನ್ನು ಸಹ ಪ್ರಚಾರಕ್ಕೆ ಕಳುಹಿಸಿದ್ದ ಮಾಹಿತಿ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.