ಬೆಂಗಳೂರು: ನಗರದ ಹಲವೆಡೆ ಕದ್ದಿದ್ದ ಮೊಬೈಲ್ಗಳನ್ನು ಮಾರುತ್ತಿದ್ದ ಆರೋಪದಡಿ ರಹೀಮ್ ಪಾಷಾ ಎಂಬುವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
‘ನೀಲಸಂದ್ರದ ಮುನಿಯಲ್ಲಪ್ಪ ಗಾರ್ಡನ್ ನಿವಾಸಿ ರಹೀಮ್ ಪಾಷಾ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಮಾಹಿತಿ ಇದೆ. ಈತನಿಂದ ₹ 40 ಸಾವಿರ ಮೌಲ್ಯದ 8 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶೇಷಾದ್ರಿಪುರ ಬಳಿಯ ಜಿಎಸ್ಬಿ ಜಂಕ್ಷನ್ನಲ್ಲಿ ಶನಿವಾರ ಸಂಜೆ ನಿಂತುಕೊಂಡಿದ್ದ ಆರೋಪಿ, ಮೊಬೈಲ್ ಮಾರಾಟಕ್ಕೆ ಯತ್ನಿಸುತ್ತಿದ್ದ. ಕೆಲವರು ವಿಚಾರಿಸಿದಾಗ, ಮೊಬೈಲ್ಗಳನ್ನು ತೋರಿಸಿದ್ದ. ಆದರೆ, ಮೊಬೈಲ್ ಖರೀದಿ ಬಗ್ಗೆ ಯಾವುದೇ ರಶೀದಿಗಳು ಆರೋಪಿ ಬಳಿ ಇರಲಿಲ್ಲ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಮೊಬೈಲ್ಗಳ ಬಗ್ಗೆ ಆರೋಪಿ ಯಾವುದೇ ಮಾಹಿತಿ ನೀಡಲಿಲ್ಲ. ಬಳಿಕವೇ ಮೊಬೈಲ್ ಕಳ್ಳತನ ಆರೋಪದಡಿ ಬಂಧಿಸಲಾಯಿತು’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.