ಬೆಂಗಳೂರು: ‘ನಾನು ತಾಯಿಯನ್ನು ಮಾರಾಟ ಮಾಡಿದ್ದೇನೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಬೇಕಿದ್ದರೆ ನನ್ನ ಬಗ್ಗೆ ಮಾತನಾಡಲಿ. 25 ವರ್ಷಗಳ ಹಿಂದೆ ನಿಧನರಾದ ತಾಯಿಯ ಬಗ್ಗೆ ಮಾತನಾಡಬೇಡಿ’ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದರು.
‘ಕಾಂಗ್ರೆಸ್ ನಾಯಕರು ಇಂತಹ ಮಾತುಗಳನ್ನು ಆಡಿದ ಕಾರಣಕ್ಕೆ ಮಾತನ್ನು ವಾಪಸ್ ಪಡೆಯಿರಿ ಎಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆಯೇ ಹೊರತು ಯಾರ ಮೇಲೂ ಹಲ್ಲೆ ಮಾಡಲು ಅಲ್ಲ’ ಎಂದು ಮುನಿರತ್ನ ಚುನಾವಣಾ ಪ್ರಚಾರದ ವೇಳೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.