ಬೆಂಗಳೂರು: ಎಚ್ಎಸ್ಆರ್ ಲೇಔಟ್ ಸಮೀಪದ ಅಗರದಲ್ಲಿ ಶ್ರೀಧರ್ (21) ಎಂಬಾತ ತನ್ನ ಸ್ನೇಹಿತ ಪೃಥ್ವಿರಾಜ್ನನ್ನು (20) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮಾರತ್ತಹಳ್ಳಿಯ ಪೃಥ್ವಿರಾಜ್, ಸಿಮ್ ಕಾರ್ಡ್ ವಿತರಕನಾಗಿದ್ದ. ಆರೋಪಿ ಅಗರ ನಿವಾಸಿಯಾಗಿದ್ದು, ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.
ಗುರುವಾರ ರಾತ್ರಿ ಶ್ರೀಧರ್ ಗೆಳೆಯನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಇಬ್ಬರೂ ನಸುಕಿನವರೆಗೂ ಪಾನಕೂಟ ನಡೆಸಿ, ನಂತರ ಹೊರಗೆ ಬಂದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಪರಸ್ಪರರ ನಡುವೆ ವಾಗ್ವಾದ ನಡೆದಿದ್ದು, ನಶೆಯಲ್ಲಿದ್ದ ಆರೋಪಿ ಸ್ನೇಹಿತನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.
ಇದೇ ವೇಳೆ ಆ ರಸ್ತೆಗೆ ಗಸ್ತು ಬಂದ ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದಲ್ಲೇ ಪೃಥ್ವಿರಾಜ್ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.