ADVERTISEMENT

ಹಣದಾಸೆಗಾಗಿ ಯುವತಿ ಕೊಲೆ: ಓಲಾ ಕ್ಯಾಬ್ ಚಾಲಕ ಸೆರೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 8:46 IST
Last Updated 23 ಆಗಸ್ಟ್ 2019, 8:46 IST
   

ಬೆಂಗಳೂರು: ವಿಮಾನ ನಿಲ್ದಾಣ ಸಮೀಪ ಇತ್ತೀಚೆಗೆ ನಡೆದಿದ್ದ ಯುವತಿಯೊಬ್ಬರ ಕೊಲೆ ಪ್ರಕರಣ ಭೇದಿಸಿರುವ ಬಾಗಲೂರು ಪೊಲೀಸರು, ಓಲಾ ಕ್ಯಾಬ್ ಚಾಲಕ ಎಚ್.ಎಂ.ನಾಗೇಶ್ ಎಂಬುವರನ್ನು ಬಂಧಿಸಿದ್ದಾರೆ.

ಹೆಗ್ಗನಹಳ್ಳಿ ಕ್ರಾಸಿನ ಸಂಜೀವಿನಿ ನಗರದ ನಿವಾಸಿಯಾ ಆತ, ಕೊಲ್ಕತ್ತಾದ ಪೂಜಾ ಸಿಂಗ್ ದೇ ಎಂಬುವರನ್ನು ಕೊಲೆ ಮಾಡಿದ್ದ.

ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯುವತಿ, ಕ್ಯಾಬ್ ಬುಕ್ ಮಾಡಿದ್ದರು. ಅದೇ ಕ್ಯಾಬಿನ ಚಾಲಕ, ಯುವತಿಯನ್ನು ಕೊಂದು ಆಕೆ ಬಳಿಯ ಹಣ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.