ಬೆಂಗಳೂರು: ಕೆ.ಜಿ.ಹಳ್ಳಿ ಠಾಣೆ ರೌಡಿಶೀಟರ್ ಬುಜ್ಜು (30) ಎಂಬಾತನನ್ನು ಆತನ ಮನೆಗೇ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ನಗರದಲ್ಲಿ ಲಾಕ್ಡೌನ್ ಇದ್ದು, ಇದರ ನಡುವೆಯೇ ಶನಿವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
‘ಕೆ.ಜಿ.ಹಳ್ಳಿ ಬಳಿಯ ನ್ಯೂ ಬಾಗಲೂರು ಲೇಔಟ್ ನಿವಾಸಿ ಬುಜ್ಜು, ಲಾಕ್ಡೌನ್ ಆದಾಗಿನಿಂದ ಮನೆಯಲ್ಲೇ ಇದ್ದ. ಅದನ್ನು ಗಮನಿಸಿಯೇ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಈ ಹಿಂದೆ ನಡೆದಿದ್ದ ರೌಡಿ ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಎಂಬಾತನ ಕೊಲೆ ಪ್ರಕರಣದಲ್ಲಿ ಬುಜ್ಜು ಆರೋಪಿಯಾಗಿದ್ದ. ಸ್ಟಾಲಿನ್ ಸಹಚರರು, ಈ ಹಿಂದೆ ಬುಜ್ಜು ಸಹೋದರ ವಿನೋದ್ನನ್ನೂ ಕೊಂದಿದ್ದರು.’
‘ಎರಡು ಕೊಲೆ ಬಳಿಕ ಗ್ಯಾಂಗ್ಗಳ ನಡುವೆ ಸಂಧಾನ ನಡೆದಿತ್ತು. ಇದರ ಬೆನ್ನಲ್ಲೇ ಬುಜ್ಜುನನ್ನು ಕೊಲೆ ಮಾಡಲಾಗಿದೆ. ಡ್ಯಾನಿಯಲ್ ಅಥವಾ ಸ್ಟಾಲಿನ್ ಸಹಚರರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.