ADVERTISEMENT

ಮೈಸೂರು ಸಿಲ್ಕ್‌ ಸ್ಪರ್ಧೆ ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 19:38 IST
Last Updated 10 ಅಕ್ಟೋಬರ್ 2018, 19:38 IST
ಐಎಎಸ್‌ ಅಧಿಕಾರಿಗಳಾದ ಎಂ.ಮಹೇಶ್ವರ್‌ ರಾವ್‌ (ಎಡ), ನೀಲಾ ಮಂಜುನಾಥ್‌ (ಮೂರನೇಯವರು) ಅವರು ಸ್ಪರ್ಧಿಗಳಿಗೆ ಬಹುಮಾನ ನೀಡಿದರು
ಐಎಎಸ್‌ ಅಧಿಕಾರಿಗಳಾದ ಎಂ.ಮಹೇಶ್ವರ್‌ ರಾವ್‌ (ಎಡ), ನೀಲಾ ಮಂಜುನಾಥ್‌ (ಮೂರನೇಯವರು) ಅವರು ಸ್ಪರ್ಧಿಗಳಿಗೆ ಬಹುಮಾನ ನೀಡಿದರು   

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‌ಐಸಿ) ವತಿಯಿಂದ ಏರ್ಪಡಿಸಿದ್ದ ‘ಮೈಸೂರು ಸಿಲ್ಕ್‌ ವಿಂಟೇಜ್‌ ಸಾರಿ’ಸ್ಪರ್ಧೆಯಲ್ಲಿ ಪದ್ಮಾವತಿ ಸುಬ್ಬಣ್ಣ ಹಾಗೂ ಬಿ.ಆರ್‌.ಶರ್ಮಿಳಾ ಅವರು ವಿಜೇತರಾದರು.

ಬಹುಮಾನ ಪಡೆದ ಮಹಿಳೆಯರಿಬ್ಬರಿಗೂ ₹18 ಸಾವಿರ ಮೊತ್ತದ ಚೆಕ್‌ ಹಾಗೂ ಟ್ರೋಫಿ ನೀಡಲಾಯಿತು. ಜೊತೆಗೆ ಐದು ಮಂದಿಗೆ ₹ 5 ಸಾವಿರ ಮೊತ್ತದ ಸಮಾಧಾನಕರ ಬಹುಮಾನವನ್ನೂ ನೀಡಲಾಯಿತು.

ಬುಧವಾರದಿಂದ ಶೇ 25ರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳ ಮಾರಾಟ ಆರಂಭವಾಗಿದೆ. ಹಬ್ಬದ ಪ್ರಯುಕ್ತ ಅಕ್ಟೋಬರ್‌ 17ರವರೆಗೆ ಮಾರಾಟ ಮುಂದುವರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.