ಬೆಂಗಳೂರು: ಜಯನಗರದ ನ್ಯಾಷನಲ್ ಕಾಲೇಜು ವತಿಯಿಂದ ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನ’ ಕುರಿತುಕಾರ್ಯಾಗಾರವನ್ನು ಇದೇ 16 ಮತ್ತು 17ರಂದು ಬೆಳಿಗ್ಗೆ 10 ಗಂಟೆಗೆ ಬಿವಿಜೆ ವಿಜ್ಞಾನ ಕೇಂದ್ರದ ಮಲ್ಟಿಮೀಡಿಯ ಸಭಾಂಣಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಎಚ್.ರಾಮರಾವ್ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ರೆಡ್ಡಿ ಹಾಗೂ ಪಿ.ಸದಾನಂದ ಮಯ್ಯ ಭಾಗವಹಿಸಲಿದ್ದಾರೆ.
‘ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ನರಸಿಂಹ ಆಯಚಿತ್, ಶಿಕ್ಷಣ ತಜ್ಞರಾದ ಎಸ್.ಎಂ.ಶಿವಪ್ರಸಾದ್, ಪ್ರೊ.ಗೌರೀಶ, ಬಿ.ಪಿ.ವೀರಭದ್ರಪ್ಪ, ಡಿ.ಬಿ.ನಾಯಕ್ ಮಾತನಾಡಲಿದ್ದಾರೆ. ಕಾರ್ಯಕ್ರಮ ಆನ್ಲೈನ್ ಮೂಲಕವೂ ಪ್ರಸಾರವಾಗಲಿದೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ವೈ.ಸಿ.ಕಮಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.