ADVERTISEMENT

ನೆಲಮಂಗಲ | ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:16 IST
Last Updated 21 ಸೆಪ್ಟೆಂಬರ್ 2024, 15:16 IST
<div class="paragraphs"><p>ಅಪಘಾತ ಸ್ಥಳದಿಂದ ಕ್ಯಾಂಟರ್‌ ತೆರವುಗೊಳಿಸಿದ ಪೊಲೀಸರು</p></div>

ಅಪಘಾತ ಸ್ಥಳದಿಂದ ಕ್ಯಾಂಟರ್‌ ತೆರವುಗೊಳಿಸಿದ ಪೊಲೀಸರು

   

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಟಿಸಿಐ ಬಳಿ ಪಂಚರ್‌ ಆಗಿ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ತುಮಕೂರು ಕಡೆಯಿಂದ ಬಂದ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ಚಿತ್ರದುರ್ಗದ ಬಿ.ಎನ್‌.ಗಂಗಾಧರ್‌ (50) ಮೃತಪಟ್ಟಿದ್ದಾರೆ.

ಗಂಗಾಧರ್‌ ಅವರ ಕ್ಯಾಂಟರ್‌ ಬೆಳಗಿನ ಜಾವ 5.30ರ ಸುಮಾರಿನಲ್ಲಿ ಪಂಚರ್‌ ಆಗಿ ರಸ್ತೆ ಬದಿ ನಿಲ್ಲಿಸಿಕೊಂಡಿದ್ದರು. ಕೆಳಗೆ ಇಳಿದು ವೀಕ್ಷಿಸುತ್ತಿದ್ದ ಗಂಗಾಧರ್‌ ಮೇಲೆ ಮಸ್ತಾನ್‌ ಅಲಿ ಚಾಲನೆ ಮಾಡುತ್ತಿದ್ದ ಕ್ಯಾಂಟರ್‌ ಹರಿದು ಸ್ಥಳದಲ್ಲೇ ಮೃತರಾಗಿದ್ದಾರೆ. ಜೊತೆಯಲ್ಲಿದ್ದ ಓಬಣ್ಣ, ಕ್ಯಾಂಟರ್‌ ಚಾಲಕ ಮಸ್ತಾನ್‌ ಅಲಿ, ಮುಜೀಬ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅತಿ ವೇಗ ಹಾಗೂ ಅಜಾರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.