ಬೆಂಗಳೂರು: ವಿಮಾನದ ಮೂಲಕ ಬಂದಿದ್ದ ಪಾರ್ಸೆಲ್ನಲ್ಲಿ ಪಿಸ್ತೂಲ್ಗಳು ಪತ್ತೆಯಾಗಿದ್ದರಿಂದ, ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪಿಸ್ತೂಲ್ ಪರಿಶೀಲನೆ ನಡೆಸಿದಾಗ, ಅವು ಆಟಿಕೆ ಪಿಸ್ತೂಲ್ಗಳು ಎಂಬುದು ತಿಳಿದ ನಂತರವೇ ಆತಂಕ ದೂರವಾಯಿತು.
‘ಇಸ್ತಾಂಬುಲ್ನಿಂದ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಗೋ ಮೂಲಕ ಪಾರ್ಸೆಲ್ ಬಂದಿತ್ತು. ಅದರಲ್ಲಿರುವ ವಸ್ತುಗಳ ಬಗ್ಗೆ ಸಿಬ್ಬಂದಿಗೆ ಅನುಮಾನ ಮೂಡಿತ್ತು. ಪಾರ್ಸೆಲ್ ತೆರೆದು ನೋಡಿದಾಗ, ಪಿಸ್ತೂಲ್ಗಳು ಇರು
ವುದು ಗೊತ್ತಾಗಿತ್ತು. ಸುದ್ದಿ ನಿಲ್ದಾಣದೆಲ್ಲೆಡೆ ಹರಡಿ, ಎಲ್ಲರೂ ಆತಂಕಗೊಂಡಿ
ದ್ದರು’ ಎಂದು ಮೂಲಗಳು ಹೇಳಿವೆ.
‘ಕಾರ್ಗೊ ಸಿಬ್ಬಂದಿ, ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದರು. ಪಿಸ್ತೂಲ್ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಇವುಗಳು ಆಟಿಕೆ ಪಿಸ್ತೂಲ್ಗಳು ಎಂಬುದಾಗಿ ಹೇಳಿದರು. ಅವಾಗಲೇ ಸಿಬ್ಬಂದಿ ನಿಟ್ಟುಸಿರು ಬಿಟ್ಟರು’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.