ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಲುವಾಗಿ ಇದೇ 4ರಿಂದ 10ರ ತನಕ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ರಾಮಯ್ಯ ಬಡಾವಣೆ, ಹಾವನೂರು ಎಕ್ಸ್ಟೆನ್ಷನ್, ರಾಷ್ಟ್ರೀಯ ಹೆದ್ದಾರಿ–4, ರಕ್ಷಣಾ ಇಲಾಖೆ ಕಾಲೊನಿ, ಮುನಿಕೊಂಡಪ್ಪ ಬಡಾವಣೆ, ಮುನೇಶ್ವರ ನಗರ, ವಿಡಿಯಾ ಶಾಲೆ, ಹೆಸರಘಟ್ಟ ಮುಖ್ಯರಸ್ತೆ, ಮಂಜುನಾಥ ನಗರ, ಹರಿಕುಮಾರ ಬಡಾವಣೆ, ಸೋಪ್ ಫ್ಯಾಕ್ಟರಿ ಸುತ್ತ–ಮುತ್ತಲಿನ ಪ್ರದೇಶ.
ಜೆಎಸ್ಎಸ್ ಶಾಲೆ, ಗಣಪತಿಪುರ, ಖೋಡೇಸ್ ಫ್ಯಾಕ್ಟರಿ, ಜೆ.ಪಿ. ನಗರ 6ನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಥಿಯೇಟರ್, ಸಿಂಧೂರ್ ಕಲ್ಯಾಣ ಮಂಟಪ, ಆರ್ಬಿಐ ಬಡಾವಣೆ, ಶ್ರೀನಿಧಿ ಬಡಾವಣೆ, ಎಸ್ಬಿಎಂ ಕಾಲೊನಿ, ಬಿಸಿಎಂಸಿ ಬಡಾವಣೆ, ತಿಪ್ಪಸಂದ್ರ, ಚನ್ನಮ್ಮ ಗಾರ್ಡನ್, ರಘುವಿನಹಳ್ಳಿ, ಚುಂಚಘಟ್ಟ ಮುಖ್ಯರಸ್ತೆ, ಜರಗನಹಳ್ಳಿ, ಎಂ.ಎಸ್. ಬಡಾವಣೆ, ಸಾರಕ್ಕಿ ಕೆರೆ ಆಸುಪಾಸು, ರಾಜಮ್ಮ ಗಾರ್ಡನ್, ರಾಜೀವ್ ಗಾಂಧಿ ರಸ್ತೆ, ಗೋವಿಂದಪ್ಪ ಬಡಾವಣೆ, ಶಿವಾನಂದ ನಗರ ಸುತ್ತ–ಮುತ್ತಲಿನ ಪ್ರದೇಶ.
ಬನ್ನೇರುಘಟ್ಟ ರಸ್ತೆ, ಪಾಂಡುರಂಗ ನಗರ, ಸಹ್ಯಾದ್ರಿ ಬಡಾವಣೆ, ಅಪೊಲೊ ಆಸ್ಪತ್ರೆ, ಅಡಿಗಾಸ್ ಹೋಟೆಲ್, ಆದರ್ಶ ಅಪಾರ್ಟ್ಮೆಂಟ್, ಡೆಲ್ಟಾ ಫಾರೆಸ್ಟ್ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.