ADVERTISEMENT

ವಿದ್ಯುತ್‌ ವ್ಯತ್ಯಯ 28ರಿಂದ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:50 IST
Last Updated 24 ಡಿಸೆಂಬರ್ 2020, 20:50 IST
ಸಾಂದರಭಿಕ ಚಿತ್ರ
ಸಾಂದರಭಿಕ ಚಿತ್ರ   

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ಜಯದೇವ ಉಪವಿಭಾಗದ ವಿವಿಧ ಪ್ರದೇಶಗಳಲ್ಲಿ ಇದೇ 28ರಿಂದ 30ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎನ್.ಎಸ್. ಪಾಳ್ಯ ಕೈಗಾರಿಕಾ ಪ್ರದೇಶ, ಬಿಟಿಎಂ ಎರಡನೇ ಹಂತ, ಮೈಕೊ ಬಡಾವಣೆ, 7ನೇ ಮುಖ್ಯರಸ್ತೆ ಹಾಗೂ 7ನೆಯ ಅಡ್ಡರಸ್ತೆ ಹಾಗೂ ಮದೀನಾ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಇಸ್ಕಾನ್‌–ಖೋಡೆ ಉಪವಿಭಾಗದಲ್ಲಿ ವ್ಯತ್ಯಯ:ಇದೇ 28ರಿಂದ 2021ರ ಜ.3ರವರೆಗೆ ಈ ಉಪವಿಭಾಗಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ADVERTISEMENT

28ರಂದು ನಾರಾಯಣ ನಗರ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ, 29ರಂದು ದೊಡ್ಡಕಲ್ಲಸಂದ್ರ ಗ್ರಾಮ, ಶ್ರಾವಂತಿ ಕಲ್ಯಾಣಮಂಟಪ, 30ರಂದು ನಮ್ಮೂರ ಹೋಟೆಲ್ ಮತ್ತು ಸುತ್ತ–ಮುತ್ತಲಿನ ಪ್ರದೇಶ, 31ರಂದು ಗುಬ್ಬಲಾಳ ರಸ್ತೆ, ಲಕ್ಷ್ಮಿ ವಿಲಾಸ್ ಬ್ಯಾಂಕ್, ಶಂಕರ ಫೌಂಡೇಷನ್‌, ದೊಡ್ಡಕಲ್ಲಸಂದ್ರ, ಜ.2ರಂದು ರಾಜ ನಂದಿನಿ ಆಸ್ಪತ್ರೆ ಸುತ್ತಲಿನ ಪ್ರದೇಶ ಹಾಗೂ 3ರಂದು ದೇವೇಂದ್ರಪ್ಪ ಕಾರ್ಖಾನೆ ಹಾಗೂ ಗ್ಲಾಸ್‌ ಕಾರ್ಖಾನೆ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.