ಬೆಂಗಳೂರು: ಕೇಬಲ್ ಸಂಕಷ್ಟ
ಪ್ರಜಾವಾಣಿ ವಾರ್ತೆ Published 25 ನವೆಂಬರ್ 2023, 23:36 IST Last Updated 25 ನವೆಂಬರ್ 2023, 23:36 IST ಚಾಮರಾಜಪೇಟೆಯ ವೇಲುಮುರುಗಪುರ, ಭಕ್ಷಿಗಾರ್ಡನ್ಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ನೇತಾಡುತ್ತಿವೆ. ಮಕ್ಕಳು ಆಟವಾಡುವಾಗ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಬೆಸ್ಕಾಂ ಅಧಿಕಾರಿಗಳು ಈ ದುಃಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು
ಚಿತ್ರ ಕಳುಹಿಸಿದವರು– ಎಸ್. ಪ್ರಭಾಕರ
ಚಿತ್ರ ಕಳುಹಿಸಿ: ನಗರದ ಹಲವೆಡೆ ವಿದ್ಯುತ್ ಕಂಬಗಳಿಗೆ ಕೇಬಲ್ಗಳನ್ನು ಸುತ್ತಲಾಗಿದೆ. ಪಾದಚಾರಿ ಮಾರ್ಗದಲ್ಲಿ ನಾಗರಿಕರಿಗೆ ಇವು ಸಂಕಷ್ಟ ಉಂಟು ಮಾಡಿವೆ. ಅಂತಹ ಅಪಾಯಕಾರಿ ಸ್ಥಳಗಳ ಚಿತ್ರಗಳನ್ನು ವಿಳಾಸದೊಂದಿಗೆ ವಾಟ್ಸ್ಆ್ಯಪ್ ಮಾಡಿ...
96060 38256
ಅರಮನೆ ರಸ್ತೆಯಲ್ಲಿರುವ ಶ್ಯಾಂಘ್ರಿ–ಲಾ ಹೋಟೆಲ್ ಮುಂಭಾಗದಲ್ಲಿನ ವೃತ್ತದ ಸಮೀಪ ಟ್ರಾನ್ಸ್ಫಾರ್ಮರ್ಗಳ ತಂತಿಗಳು ಅಪಾಯಕಾರಿ ಮಟ್ಟದಲ್ಲಿವೆ
ಎನ್. ನಾಗನಹಳ್ಳಿಯ ಎಂ.ಸಿ.ಎಸ್. ಕನ್ವೆನ್ಷನ್ ಹಾಲ್ ಹಿಂಭಾಗದ ಕೆಂಪೇಗೌಡ ಬಡಾವಣೆಯಲ್ಲಿ ವಿದ್ಯುತ್ ವೈರ್ಗಳು ಕೈಗೆಟುಕುವ ಮಟ್ಟದಲ್ಲಿವೆ
ಸೇಂಟ್ ಜೋಸೆಫ್ಸ್ ಪಿಯು ಕಾಲೇಜಿನ ಸಮೀಪದ ರೆಸಿಡೆನ್ಸಿ ರಸ್ತೆಯ ಪಾದಚಾರಿ ಮಾರ್ಗದ ಮೇಲಿದ್ದ ಕೇಬಲ್ಗಳನ್ನು ಬೆಸ್ಕಾಂ ತೆರವು ಮಾಡಿದೆ
ರೇಸ್ಕೋರ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ವೈರ್ಗಳು ಕಾಲಿಗೆ ತಾಗದಂತೆ ಬೆಸ್ಕಾಂ ಸಿಬ್ಬಂದಿ ರಿಪೇರಿ ಮಾಡಿದ್ದಾರೆ