ADVERTISEMENT

21ರಿಂದ ಪುರಂದರದಾಸರ ಸಂಗೀತ ಆರಾಧನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:32 IST
Last Updated 16 ಅಕ್ಟೋಬರ್ 2021, 19:32 IST

ಬೆಂಗಳೂರು: ಸಂತ ಪುರಂದರದಾಸರ ಆರಾಧನಾ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇದೇ 20ರಿಂದ 24ರವರೆಗೆ ‘ಪುರಂದರದಾಸರ ಸಂಗೀತ ಆರಾಧನೆ’ ಕಾರ್ಯಕ್ರಮವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಮಿತಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ಪುರಂದರದಾಸರಿಗೆ ಗೌರವ ಸೂಚಿಸುವ ಸಲುವಾಗಿ ಐದು ದಿನಗಳ ಕಾಲಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ಕೂಚಿಪುಡಿ, ರಂಗ ಗೀತೆ, ಜಾನಪದ ಗೀತೆಗಳ ಗಾಯನವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರು ಇದೇ 20ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಆರಾಧನಾ ಸಮಿತಿಯ ಪೋಷಕ ವಿದ್ಯಾಭೂಷಣ್ ಅವರು ಭಾಗವಹಿಸಲಿದ್ದಾರೆ. ಇದೇ 24ರಂದು ಬೆಳಿಗ್ಗೆ 11.30ಕ್ಕೆ ಪುರಂದರದಾಸರ ‘ನವರತ್ನ ಮಾಲಿಕೆ’ ಸಮೂಹ ಗೋಷ್ಠಿಗಾಯನ ಇರಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರತಿದಿನ ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಯುವ ನೃತ್ಯ ಪ್ರತಿಭೆಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು 9845227800 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.