ADVERTISEMENT

ಮಳೆ ಚುರುಕು: ಕೃಷಿ ಚಟುವಟಿಕೆ ಬಿರುಸು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:43 IST
Last Updated 9 ಸೆಪ್ಟೆಂಬರ್ 2019, 19:43 IST
ರಾಗಿ ಹೊಲದಲ್ಲಿ ಕಾರ್ಯನಿರತ ರೈತ
ರಾಗಿ ಹೊಲದಲ್ಲಿ ಕಾರ್ಯನಿರತ ರೈತ   

ದಾಬಸ್ ಪೇಟೆ: ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ ಕಳೆದೊಂದು ತಿಂಗಳಿಂದ ಚುರುಕುಗೊಂಡಿದ್ದು, ಸೋಂಪುರ ಹೋಬಳಿಯ ರೈತರ ಮೊಗ ದಲ್ಲಿ ಮಂದಹಾಸ ಮೂಡಿಸಿದೆ.

‘ವಿಳಂಬವಾಗಿ ರಾಗಿ ಬಿತ್ತನೆ ಮಾಡಲಾಗಿದ್ದು, ಸದ್ಯ ಕಳೆ ತೆಗೆಯುತ್ತಿದ್ದೇವೆ’ ಎಂದು ಹಾಲೇನಹಳ್ಳಿ ರೈತ ಶಿವ ಕುಮಾರ್ ಹೇಳಿದರು. 91 ಗ್ರಾಮಗಳಿರುವ ಸೋಂಪುರ ಹೋಬಳಿಯಲ್ಲಿ ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ತೊಗರಿ, ನೆಲಗಡಲೆ, ಅಲಸಂದೆ ರೀತಿಯ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ.

ಸೈನಿಕ ಹುಳು ಕಾಟದಿಂದ ಜೋಳ ಬೆಳೆಯುವುದನ್ನು ರೈತರು ಕಡಿಮೆ ಮಾಡಿದ್ದಾರೆ. ಸದ್ಯ ರಾಗಿಯೇ ಪ್ರಮುಖ ಬೆಳೆಯಾಗಿದ್ದು, 3,965 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ADVERTISEMENT

‘ಸೈನಿಕ ಹುಳು ಕಾಟ ನಿವಾರಣೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿ ಲಭ್ಯವಿದೆ.’ ಎಂದು ಕೃಷಿ ಅಧಿಕಾರಿ ಆನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.