ಬೆಂಗಳೂರು: ‘ಆರ್ಥಿಕ ಸಮಸ್ಯೆಯ ಕಾರಣ ಪದವಿಯ ಆಸೆಯನ್ನು ಅದುಮಿಟ್ಟುಕೊಂಡು ಪರಿತಪಿಸುತ್ತಿದ್ದ ಕಾಲದಲ್ಲಿಬಬ್ಬೂರುಕಮ್ಮೆ ವಸತಿ ನಿಲಯ ನನ್ನ ಕೈಹಿಡಿದು ಜೀವನ ಕಟ್ಟಿಕೊಳ್ಳಲು ಸಹಕಾರಿಯಾಯಿತು’ ಎಂದುಮಾಜಿ ರಾಜ್ಯಪಾಲ ರಾಮಾಜೋಯಿಸ್ ಹೇಳಿದರು.
ಬಬ್ಬೂರುಕಮ್ಮೆ ಸೇವಾ ಸಮಿತಿ ಹಮ್ಮಿಕೊಂಡಿದ್ದ ಬಬ್ಬೂರುಕಮ್ಮೆ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘1947ರಲ್ಲಿ ಶಿವಮೊಗ್ಗದಲ್ಲಿಎಸ್ಎಸ್ಎಲ್ಸಿ ಮುಗಿಸಿದೆ. ಆಗ ಅಣ್ಣಂದಿರು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮುಂದೆ ಓದುವ ಆಸೆಯಿದ್ದರೂ ಆರ್ಥಿಕ ಸಂಕಷ್ಟದ ಕಾರಣಆಗುಂಬೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದೆ. ಶಿವಮೊಗ್ಗದ ಹಿರಿಯರ ಸಲಹೆಯ ಮೇರೆಗೆ ಬಬ್ಬೂರುಕಮ್ಮೆ ವಸತಿ ನಿಲಯ ಸೇರಿ ಬಿಎಸ್ಸಿ ಮುಗಿಸಿದೆ’ ಎಂದರು.
‘ಮುಂದೆ ಕಾನೂನು ಪದವಿ ಮಾಡುವ ಆಸೆಯಾಯಿತು. ಆದರೆ, ಶುಲ್ಕ ಕಟ್ಟುಲು ಹಣವಿರಲಿಲ್ಲ. ಪತ್ರಿಕೆಯೊಂದರ ಸಂಪಾದಕರು ಶುಲ್ಕ ಕಟ್ಟಿ ಕಾನೂನು ಕಾಲೇಜಿಗೆ ಸೇರಿಸಿದರು. ಇಷ್ಟೆಲ್ಲಾ ಸಾಧನೆಗೆ ಬಬ್ಬೂರುಕಮ್ಮೆ ವಸತಿ ನಿಲಯ ಕಾರಣ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ’ಎಂದರು.
ತಿಪಟೂರು ಶಾಸಕ ಬಿ.ಸಿ ನಾಗೇಶ್, ‘ಗ್ರಾಮೀಣ ಭಾಗದಲ್ಲಿ ಆದಾಯ ಕಡಿಮೆ ಇರುತ್ತದೆ. ವಸತಿ ನಿಲಯಗಳನ್ನು ನಿರ್ಮಿಸಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಬಬ್ಬೂರುಕಮ್ಮೆ ಸೇವಾ ಸಮಿತಿ ಆ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿ ಮಾಡುತ್ತಿದೆ. ದಾನಿಗಳಿಂದ ಹಣ ಸಂಗ್ರಹಿಸಿವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ವಸತಿ ನಿಲಯವನ್ನು ನಿರ್ಮಿಸಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.