ಬೊಮ್ಮನಹಳ್ಳಿ: ನಗರದ ಎಚ್ಎಸ್ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಲ್ಲಿ ‘ರಾಮರಾಜ್ ಕಾಟನ್’ ಸಂಸ್ಥೆಯ ನೂತನ ಮಳಿಗೆ ಶುಕ್ರವಾರ ಆರಂಭವಾಯಿತು.
ವಿಶೇಷವಾಗಿ ಪಂಚೆಗೆ ಹೆಸರುವಾಸಿಯಾಗಿರುವ ‘ರಾಮರಾಜ್’ ದೇಶದಾದ್ಯಂತ 171 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಇದೀಗ ತನ್ನ 14ನೇ ಮಳಿಗೆಯನ್ನು ತೆರೆದಿದೆ.
ಸಂಸ್ಥೆಯ ರಾಯಭಾರಿಯೂ ಆಗಿರುವ ನಟ ರಮೇಶ್ ಅರವಿಂದ್ ಅವರು ಮಳಿಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,‘ರಾಮರಾಜ್ ಕಾಟನ್ನಲ್ಲಿ ವ್ಯಾಪಾರ ಎಂಬುದು ಒಂದು ಧರ್ಮ. ಲಾಭಕ್ಕಿಂತಲೂ ಹೆಚ್ಚಾಗಿ ಉದ್ಯೋಗ ಸೃಷ್ಟಿ, ಗ್ರಾಹಕರ ಹಿತ ಹಾಗೂ ಭಾರತೀಯ ಸಂಸ್ಕೃತಿ ಉಳಿಸುವ ಉದ್ದೇಶಕ್ಕೆ ಆದ್ಯತೆ ನೀಡಲಾಗಿದೆ. ಆ ಕಾರಣಕ್ಕಾಗಿ ಸಂಸ್ಥೆಯ ರಾಯಭಾರಿ ಆಗಿರುವೆ’ ಎಂದರು.
‘ದಕ್ಷಿಣ ಭಾರತದ ಉಡುಪು ಎಂದರೆ ಸೀರೆ, ಅಂಗಿ, ಪಂಚೆಯ ನೆನಪಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ, ಆಚಾರ-ವಿಚಾರ ಹಾಗೂ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ರಾಮರಾಜ್ ಕಾಟನ್ ಇಂತಹ ಸವಾಲನ್ನು ಅವಕಾಶವಾಗಿ ಸ್ವೀಕರಿಸಿ, ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.