ಬೆಂಗಳೂರು: ನಗರದಿಂದ ತಿರುನಲ್ಲಾರ್ಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರೊಬ್ಬರ ₹ 5 ಲಕ್ಷ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ಸೋಮಪ್ಪ ಟಿ. ಎನ್. ಅವರಿಗೆ ತಲಾ ₹ 5,000 ನಗದು ಬಹುಮಾನ ನೀಡಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಮಂಗಳವಾರ ಅಭಿನಂದಿಸಿದರು.
ಬೆಂಗಳೂರು ಕೇಂದ್ರೀಯ ವಿಭಾಗದ ಬಸ್ನಲ್ಲಿ ಜೂನ್ 14ರಂದು ಪ್ರಯಾಣಿಕರ ಸೋಗಿನಲ್ಲಿ ಆರೋಪಿ ಪ್ರಯಾಣಿಸುತ್ತಿದ್ದ. ಬಸ್ನಲ್ಲಿದ್ದ ತಿರುಮುರುಗನ್ ದಂಪತಿಯ ಬ್ಯಾಗ್ವೊಂದನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ. ಆತನನ್ನು ನೋಡಿದ್ದ ಚಾಲಕ–ನಿರ್ವಾಹಕ ಬೆನ್ನಟ್ಟಿ ಹಿಡಿದಿದ್ದರು. ನಂತರ, ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.