ADVERTISEMENT

ಒಎಫ್‌ಸಿಗಾಗಿ ರಸ್ತೆ ಅಗೆತ: ಕ್ರಿಮಿನಲ್‌ ಪ್ರಕರಣಕ್ಕೆ BBMP ಆಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 20:28 IST
Last Updated 17 ಜುಲೈ 2023, 20:28 IST
   

ಬೆಂಗಳೂರು: ಮೂರು ತಿಂಗಳ ಹಿಂದೆ ಡಾಂಬರು ಹಾಕಿದ ರಸ್ತೆಗಳನ್ನು ಅಗೆದಿರುವ ಒಎಫ್‌ಸಿ ಸಂಸ್ಥೆಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ವಿವಿ ಪುರ, ಸುಂಕೇನಹಳ್ಳಿ, ಜಯನಗರ ಹಾಗೂ ಹೊಂಬೇಗೌಡನಗರ ವಾರ್ಡ್‌ಗಳಲ್ಲಿ ಆರ್‌ಜೆಐಎಲ್‌, ಏರ್‌ಟೆಲ್‌ ಸೇರಿದಂತೆ ಮೂರ್ನಾಲ್ಕು ಸಂಸ್ಥೆಗಳು ರಸ್ತೆಗಳನ್ನು ಅಗೆದಿವೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್ ಅವರು ಸೋಮವಾರ ತುಷಾರ್‌ ಗಿರಿನಾಥ್‌ ಅವರಿಗೆ ದೂರು ನೀಡಿದ್ದರು. ಇದರಂತೆ ಕ್ರಮ ಕೈಗೊಳ್ಳುವಂತೆ ವಲಯ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗೆ ಅವರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT