ಬೆಂಗಳೂರು: ನಗರ ಹೊರವಲಯದ ಒಂಟಿ ಮನೆಗಳನ್ನು ಹಗಲು ವೇಳೆ ಗುರುತಿಸಿ, ರಾತ್ರಿ ಮನೆಗೆ ನುಗ್ಗಿ ದರೋಡೆ ನಡೆಸು ತ್ತಿದ್ದ 7 ಮಂದಿ ಅಂತರರಾಜ್ಯ ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ಧಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶೇಖ್ ಕಲೀಂ, ಬಿಹಾರದ ನಿನಾಜ್, ಉತ್ತರ ಪ್ರದೇಶ ಮೊಹಮ್ಮದ್ ಇಮ್ರಾನ್ ಶೇಕ್ ಹಾಗೂ ಸೈಯದ್ ಫೈಜಲ್ ಆಲಿ, ರಾಜಸ್ಥಾನದ ಜಾಲ್ವಾಡ್ ಜಿಲ್ಲೆಯ ತಾಣ ತಾಲ್ಲೂಕಿನ ರಾಮ್ ಬಿಲಾಸ್, ಮಧ್ಯಪ್ರದೇಶದ ಸುನಿಲ್ ಡಾಂಗಿ, ಒಡಿಶಾದ ಬಲ್ಲೇಶ್ವರ್ ಜಿಲ್ಲೆ ಭುವನೇಶ್ವರ ಗ್ರಾಮದ ರಜತ್ ಮಲ್ಲಿಕ್ ಬಂಧಿತ ಆರೋಪಿಗಳು.
‘ಹಗಲು ವೇಳೆಯಲ್ಲಿ ಮನೆಯವರ ಚಲನವಲನ ಗಮನಿಸುತ್ತಿದ್ದ ಆರೋಪಿ ಗಳು ರಾತ್ರಿ ವೇಳೆ, ಕಿಟಕಿ ಮೇಲಿನ ಸಜ್ಜಾದ ಸಹಾಯದಿಂದ ಮನೆಯ ಟೆರೇಸ್ ಮೇಲೆ ಹತ್ತಿ ಅಲ್ಲಿನ ಕೊಠಡಿಯ ಬೀಗ ಒಡೆದು ಮನೆಯ ಒಳಕ್ಕೆ ಪ್ರವೇಶಿಸುತ್ತಿದ್ದರು. ಮನೆಯವರನ್ನು ಬೆದರಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗುತ್ತಿದ್ದರು. ಇದನ್ನೇ ಪ್ರವೃತ್ತಿ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.