ADVERTISEMENT

ಮಹಿಳೆಗೆ ನಿಂದನೆ: ಆರ್‌ಟಿಐ ಕಾರ್ಯಕರ್ತ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 20:22 IST
Last Updated 20 ಡಿಸೆಂಬರ್ 2021, 20:22 IST

ಬೆಂಗಳೂರು: ಕೆಲಸಕ್ಕೆ ಅಡ್ಡಿಪಡಿಸುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆರ್‌ಟಿಐ ಕಾರ್ಯಕರ್ತ ಕೃಷ್ಣಮೂರ್ತಿಗೌಡ ಎಂಬಾತನ ವಿರುದ್ಧ ಬಿಬಿಎಂಪಿಯ ಕತ್ರಿಗು‍ಪ್ಪೆ ವಾರ್ಡ್‌–163ರ ಸಹಾಯಕ ಎಂಜಿನಿಯರ್‌ ಶ್ವೇತಾ ದೂರು ನೀಡಿದ್ದಾರೆ. ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘18ರಂದು ಅಧಿಕಾರಿಯೊಬ್ಬರ ಜೊತೆ ಕೆಲಸದ ವಿಚಾರವಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಆರೋಪಿ ಏಕಾಏಕಿ ಕೊಠಡಿಗೆ ನುಗ್ಗಿ ಇಬ್ಬರಿಗೂ ಬೆದರಿಕೆ ಹಾಕಿದ್ದ. ಕೆಲಸದಿಂದ ತೆಗೆಸುವುದಾಗಿಯೂ ಹೆದರಿಸಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT