ADVERTISEMENT

2ನೇ ಪ್ರತಿ ಸಮವಸ್ತ್ರ ಇಲ್ಲ: ಎಸ್. ಸುರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:22 IST
Last Updated 26 ಸೆಪ್ಟೆಂಬರ್ 2019, 20:22 IST
ಎಸ್. ಸುರೇಶ್‌ ಕುಮಾರ್
ಎಸ್. ಸುರೇಶ್‌ ಕುಮಾರ್    

ಬೆಂಗಳೂರು: ಈ ವರ್ಷ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಎರಡನೇ ಪ್ರತಿ ಸಮವಸ್ತ್ರ ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಗುರುವಾರ ಇಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಶಿಕ್ಷಣ ಅಭಿಯಾನದಲ್ಲಿ ಕೇಂದ್ರ ನೀಡುವ ಹಣದ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಬಾರಿ ಎರಡನೇ ಪ್ರತಿ ಸಮವಸ್ತ್ರ ನೀಡದಿರಲು ನಿರ್ಧರಿಸಲಾಗಿದೆ, ಆದರೆ ಮುಂದಿನ ವರ್ಷ ಎರಡನೇ ಪ್ರತಿ ಸಮವಸ್ತ್ರವನ್ನು ಸಮಯಕ್ಕೆ ಸರಿಯಾಗಿ ಪೂರೈಸಲಾಗುವುದು ಎಂದರು.

ವಿಶೇಷವೆಂದರೆ ಕುಮಾರಸ್ವಾಮಿ ಸರ್ಕಾರ ರಾಜ್ಯದ ನಿಧಿಯನ್ನೇ ಬಳಸಿಕೊಂಡು ಎರಡನೇ ಪ್ರತಿ ಸಮವಸ್ತ್ರ ಒದಗಿಸಲು ನಿರ್ದೇಶನ ನೀಡಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಇದಕ್ಕೆ ಕಡೆಗಣಿಸಲಾಗಿದೆ.

ADVERTISEMENT

ಕಳೆದ ಮೂರು ವರ್ಷಗಳಿಂದಲೂ ಮಕ್ಕಳು ಎರಡು ಪ್ರತಿ ಸಮವಸ್ತ್ರ ಪಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.