ಬೆಂಗಳೂರು: ಎಸ್.ಜಿ.ಎಸ್ ವಾಗ್ದೇವಿಯು ಬೆಳ್ಳಿಹಬ್ಬದ ಪ್ರಯುಕ್ತ ಜ.1ರಂದು ಆನ್ಲೈನ್ ಮೂಲಕ ವಿಚಾರಸಂಕಿರಣ ಹಮ್ಮಿಕೊಂಡಿದೆ.
‘ಕೋವಿಡ್ ಬಳಿಕ ಹೇರಲಾದ ಲಾಕ್ಡೌನ್ ಮತ್ತು ಶಾಲಾ ರಜೆಯ ಕಾರಣ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣದ ಮೇಲೆ ಆಗಿರುವ ಪರಿಣಾಮಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದೆ. ಶ್ರವಣ ದೋಷವುಳ್ಳ ಮಕ್ಕಳ ನಡವಳಿಕೆಯಲ್ಲಾದ ಬದಲಾವಣೆಗಳು, ಅವರ ಮಾತು, ಭಾಷೆ, ಓದು ಹಾಗೂ ಬರಹದ ಮೇಲಾದ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. ಆಸಕ್ತರು ಇ ಮೇಲ್ ವಿಳಾಸ vagdevitrust@gmail.com ಮೂಲಕ ಹೆಸರು ನೋಂದಾಯಿಸಿ
ಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಕ್ಕೆ ದೂರವಾಣಿ: 080 26727141
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.