ADVERTISEMENT

ಆಂಧ್ರಪ್ರದೇಶದಲ್ಲಿ ಕಾರು ‌ಅಪಘಾತ: ಶಿವಾಜಿನಗರ ಪಿಎಸ್ಐ, ಕಾನ್‌ಸ್ಟೆಬಲ್ ಸಾವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 5:44 IST
Last Updated 24 ಜುಲೈ 2022, 5:44 IST
ಪಿಎಸ್ಐ ಅವಿನಾಶ್
ಪಿಎಸ್ಐ ಅವಿನಾಶ್   

ಬೆಂಗಳೂರು: ಆಂಧ್ರಪ್ರದೇಶದ‌ ಚಿತ್ತೂರು- ತಿರುಪತಿ ರಸ್ತೆಯಲ್ಲಿ‌ ಅಪಘಾತ‌ ಸಂಭವಿಸಿದ್ದು, ಬೆಂಗಳೂರಿನ ಶಿವಾಜಿನಗರ ಠಾಣೆ ಪಿಎಸ್ಐ, ಕಾನ್‌ಸ್ಟೆಬಲ್ ಹಾಗೂ ಕಾರಿನ ಚಾಲಕ ಮೃತಪಟ್ಟಿದ್ದಾರೆ.

ಶಿವಾಜಿನಗರದ ಪಿಎಸ್ಐ ಆಗಿದ್ದ ಬಸವ ಕಲ್ಯಾಣದ ಅವಿನಾಶ್ (29), ಕಾನ್‌ಸ್ಟೆಬಲ್ ಅನಿಲ್​​ ಮುಲಿಕ್ ಮತ್ತು ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್​​​, ಕಾನ್ಸ್​ಟೇಬಲ್​​ ಶರಣಬಸವ ಎಂಬುವರಿಗೆ ಗಾಯವಾಗಿದೆ.‌ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಂಜಾ ಮಾರಾಟ ಹಾಗೂ‌ ಸಾಗಣೆ ಆರೋಪಿಗಳ ಬಂಧನಕ್ಕಾಗಿ ಶಿವಾಜಿನಗರ ಪೊಲೀಸರ ತಂಡ ಇನ್ನೋವಾ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ‌ ಹೋಗಿತ್ತು. ಇದೇ ವೇಳೆಯೇ ಅಪಘಾತ‌ ಸಂಭವಿಸಿದೆ.

ಬೆಂಗಳೂರಿನಿಂದ ಶನಿವಾರ ಹೊರಟಿದ್ದ ತಂಡ, ಭಾನುವಾರ ಬೆಳಿಗ್ಗೆ ಚಿತ್ತೂರಿನಿಂದ ತಿರುಪತಿಯತ್ತ ತೆರಳುತ್ತಿತ್ತು. ಚಾಲಕ ನಿಯಂತ್ರಣ ತಪ್ಪಿದ್ದರಿಂದ ಕಾರು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು‌ ಉರುಳಿ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.