ADVERTISEMENT

ಶೋಭಾಗೆ ಸರಳಾ ರಂಗನಾಥ್ ರಾವ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 20:19 IST
Last Updated 27 ಅಕ್ಟೋಬರ್ 2020, 20:19 IST
ಶೋಭಾ ಹಿರೇಕೈ ಕಂಡ್ರಾಜಿ
ಶೋಭಾ ಹಿರೇಕೈ ಕಂಡ್ರಾಜಿ   

ಬೆಂಗಳೂರು: ಸರಳಾ ರಂಗನಾಥ್ ರಾವ್ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಲೇಖಕಿಯರ ಚೊಚ್ಚಲ ಕೃತಿಗೆ ನೀಡಲಾಗುವ 'ಸರಳಾ ರಂಗನಾಥ್ ರಾವ್ ಪ್ರಶಸ್ತಿ'ಗೆ ಶಿರಸಿಯ ಶೋಭಾ ಹಿರೇಕೈ ಕಂಡ್ರಾಜಿ ಅವರ 'ಅವ್ವ ಮತ್ತು ಅಬ್ಬಲಿಗೆ' ಕವನ ಸಂಕಲನ ಆಯ್ಕೆಯಾಗಿದೆ.

ಪ್ರತಿಷ್ಠಾನದ ಗೌರವಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ, ಕವಿ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಜಿ.ಎನ್.ರಂಗನಾಥ್ ರಾವ್ ಅವರು ಈ ಪ್ರಶಸ್ತಿಗೆ ಶೋಭಾ ಅವರನ್ನು ಆಯ್ಕೆ ಮಾಡಿದ್ದಾರೆ.

ಪ್ರಶಸ್ತಿ ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಬೆಂಗಳೂರಿನಲ್ಲಿ ಜನವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.