ADVERTISEMENT

ನಿವೇಶನ ವಂಚನೆ: ಸಿ.ಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:34 IST
Last Updated 18 ಅಕ್ಟೋಬರ್ 2019, 19:34 IST

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನನ್ನ ಹೆಸರಿಗೆ ಮಂಜೂರಾಗಿದ್ದ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೊಬ್ಬರಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು, ನಿವೇಶನವನ್ನು ವಾಪಸ್ ಕೊಡಿಸಿ’ ಎಂದುಸ್ವಾತಂತ್ರ್ಯ ಹೋರಾಟಗಾರ ಇಂದ್ರಜಿತ್‌ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

‘5.89 ಲಕ್ಷ ಕಿ.ಮೀನಷ್ಟು ಕಾಲ್ನಡಿಗೆಯಲ್ಲಿ ನಡೆದು ದೇಶಕ್ಕೆ ಕೀರ್ತಿ ತಂದಿದ್ದೇನೆ. ಅದಕ್ಕಾಗಿ ಹಲವು ಪ್ರಶಸ್ತಿಗಳು ಬಂದಿವೆ. 1980ರ ಏಪ್ರಿಲ್ 14ರಂದು ಬೆಂಗಳೂರಿನ ಆರ್‌.ಪಿ.ಸಿ ಬಡಾವಣೆಯಲ್ಲಿ 90x40 ಅಳತೆಯ ನಿವೇಶನವನ್ನು ಬಿಡಿಎ ನನಗೆ ನೀಡಿತ್ತು. ₹25 ಸಾವಿರ ಕೊಟ್ಟು ಆ ನಿವೇಶನದ ಸ್ವಾಧೀನಪತ್ರವನ್ನು ಪಡೆದಿದ್ದೆ’.

‘ಅದಾದ ಬಳಿಕ, ವಿಶ್ವ ಶಾಂತಿಗಾಗಿ ವಿಶ್ವಪರ್ಯಟನೆಗೆ ಹೋಗಿದ್ದೆ. ಅದೇ ವೇಳೆಯಲ್ಲೇ ಜಿಪಿಎ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನವನ್ನು ಮಹಿಳೆಯೊಬ್ಬರಿಗೆ ವರ್ಗಾಯಿಸಲಾಗಿದೆ. ಈ ವಂಚನೆಯಲ್ಲಿ ಕೆಲವುಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದಾರೆ. ನಿವೇಶನ ₹22 ಕೋಟಿ ಮೌಲ್ಯ ಬೆಲೆ ಬಾಳಲಿದ್ದು, ನಿವೇಶನ ನೀಡಲು ಸಾಧ್ಯವಾಗದಿದ್ದಲ್ಲಿ ಹಣವನ್ನು ನೀಡಲಿ. ಬಂದ ಹಣವನ್ನು ಧರ್ಮಸ್ಥಳದ ಮಂಜುನಾಥ ಟ್ರಸ್ಟ್‌ಗೆ ನೀಡಲಾಗುವುದು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.