ಬೆಂಗಳೂರು: ಕೋಣನಕುಂಟೆಯಲ್ಲಿ ನಡೆದ ಒವೈಎಲ್ ಬಾತ್ ಸೋಪ್ (ಪ್ಲಾಂಟ್ ಸೈನ್ಸ್) ಮಿಸೆಸ್ ಇಂಡಿಯಾ ಕರ್ನಾಟಕ 2023 ಗ್ರ್ಯಾಂಡ್ 7ನೇ ಆವೃತ್ತಿಯ ರಾಜ್ಯ ಫೈನಲ್ನಲ್ಲಿ ಸ್ನೇಹಾ ಶ್ರೀಧರ್ ಕಿರೀಟ ಮುಡಿಗೇರಿಸಿಕೊಂಡರು.
ಗೋಡಂಬಿ ಶ್ರೀಧರ್ ಅವರ ಮಗಳಾದ ಸ್ನೇಹಾ ಶ್ರೀಧರ್ ಬಿ.ಕಾಂ ಉತ್ತೀರ್ಣರಾದ ಮೇಲೆ ತಂದೆಯ ಎಸ್ಎಸ್ಎಸ್ಎಸ್ ಕೇಟರಿಂಗ್ ಸರ್ವೀಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹೋಮಿಯೋಪಥಿ ವೈದ್ಯ ರೋಹಿತ್ ಶ್ರೀವತ್ಸನ್ ಜತೆಗೆ ಮದುವೆಯಾದ ಮೇಲೆ ಬದುಕಿನ ಚಿತ್ರಣ ಇನ್ನೊಂದು ರೀತಿ ಬದಲಾಯಿಸಿಕೊಂಡರು. ವಿಕ್ಟರಿ ಹೋಮಿಯೊಪಥಿ ಸ್ಪೆಷಾಲಿಟಿ ಕ್ಲಿನಿಕ್ನ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡರು. ಜೊತೆಗೆ ವೈದ್ಯಕೀಯ ಅಭ್ಯಾಸ ನಡೆಸಿದರು.
ಎರಡು ಮಕ್ಕಳ ತಾಯಿ ಆಗಿರುವ ಸ್ನೇಹಾ ಈಗ ಮಿಸೆಸ್ ಇಂಡಿಯಾ ಕರ್ನಾಟಕ 2023 ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.