ADVERTISEMENT

ರಾಜಕೀಯ ಲಾಭಕ್ಕಾಗಿ ಸಿಎಎ ವಿರುದ್ದ ಅಪಪ್ರಚಾರ: ನ್ಯಾಯವಾದಿ ಪೂರ್ಣಿಮಾ ಮಲ್ಲೇಶ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 5:09 IST
Last Updated 27 ಜನವರಿ 2020, 5:09 IST
ಸಿಎಎ ಹಾಗೂ ಎನ್ಆರ್‌ಸಿ ಬೆಂಬಲಿಸಿ ಪ್ರಧಾನಿಯವರಿಗೆ ಮಠದ ಭಕ್ತರು ಬರೆದ ಪತ್ರವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರಿಗೆ ನೀಡಿದರು. ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಪೂರ್ಣಿಮಾ ಮಲ್ಲೇಶ್, ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್ ರೆಡ್ಡಿ, ಬಿಜೆಪಿ ಕೆ.ಆರ್‌.ಪುರ ಘಟಕದ ಅಧ್ಯಕ್ಷ ಶಿವರಾಜ್ ಇದ್ದರು.
ಸಿಎಎ ಹಾಗೂ ಎನ್ಆರ್‌ಸಿ ಬೆಂಬಲಿಸಿ ಪ್ರಧಾನಿಯವರಿಗೆ ಮಠದ ಭಕ್ತರು ಬರೆದ ಪತ್ರವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರಿಗೆ ನೀಡಿದರು. ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಪೂರ್ಣಿಮಾ ಮಲ್ಲೇಶ್, ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್ ರೆಡ್ಡಿ, ಬಿಜೆಪಿ ಕೆ.ಆರ್‌.ಪುರ ಘಟಕದ ಅಧ್ಯಕ್ಷ ಶಿವರಾಜ್ ಇದ್ದರು.   

ಕೆ.ಆರ್.ಪುರ: ‘ಭಾರತದಲ್ಲಿ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಯಾವುದೇ ರೀತಿಯ ಜನಾಂಗೀಯ ದ್ವೇಷ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ನ ವಕೀಲರಾದ ಪೂರ್ಣಿಮಾ ಮಲ್ಲೇಶ್ ಹೇಳಿದರು.

ಕೆ.ಆರ್.ಪುರದ ಸಮೀಪದ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ‌ ಮಠದ 193ನೇ ಧರ್ಮ ಚಿಂತನ ಸಭೆ, ಸಿಎಎ ಮತ್ತು ಎನ್ಆರ್‌ಸಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಒಳ್ಳೆಯ ಉದ್ದೇಶದಿಂದ ಸಿಎಎ ಮತ್ತು ಎನ್ಆರ್‌ಸಿ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಆದರೆ, ಕೆಲ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮುಸ್ಲಿಂ ಸಮುದಾಯದವರ ತಲೆಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಿಎಎ ಮತ್ತು ಎನ್ಆರ್‌ಸಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಧರ್ಮ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಎ ಮತ್ತು ಎನ್ಆರ್‌ಸಿಯಿಂದ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.