ADVERTISEMENT

ಒಂದೇ ಸೂರಿನಡಿ ಹಲವು ಬ್ರ್ಯಾಂಡ್ : ಮೂರು ದಿನ ಸಿದ್ಧ ಉಡುಪುಗಳ ಮಾರಾಟ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 15:44 IST
Last Updated 1 ಆಗಸ್ಟ್ 2023, 15:44 IST
ಮೇಳದಲ್ಲಿ ಬಿ.ಸಿ. ಶಿವಕುಮಾರ್ ಅವರು ಉಡುಪುಗಳನ್ನು ವೀಕ್ಷಿಸಿದರು. ಶರಣ್ಯ ಶೆಟ್ಟಿ, ಅನುರಾಗ್ ಸಿಂಘ್ಲಾ, ರಾಜೇಶ್ ಚಾವತ್ ಇದ್ದಾರೆ.
ಮೇಳದಲ್ಲಿ ಬಿ.ಸಿ. ಶಿವಕುಮಾರ್ ಅವರು ಉಡುಪುಗಳನ್ನು ವೀಕ್ಷಿಸಿದರು. ಶರಣ್ಯ ಶೆಟ್ಟಿ, ಅನುರಾಗ್ ಸಿಂಘ್ಲಾ, ರಾಜೇಶ್ ಚಾವತ್ ಇದ್ದಾರೆ.   

ಬೆಂಗಳೂರು: ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ 28ನೇ ಸಿದ್ಧ ಉಡುಪುಗಳ ಮಾರಾಟ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಒಂದೇ ಸೂರಿನಡಿ 150ಕ್ಕೂ ಅಧಿಕ ಬ್ರ್ಯಾಂಡ್‌ಗಳ ಉಡುಪುಗಳಿವೆ.

ಮೇಳ ಉದ್ಘಾಟಿಸಿದ ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಶಿವಕುಮಾರ್, ‘ಚಿಲ್ಲರೆ ವ್ಯಾಪಾರಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಎಲ್ಲಾ ಉತ್ಪಾದಕರು ಒಂದೆಡೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ. ಬೆಂಗಳೂರು ಇಡೀ ದೇಶದಲ್ಲಿ ಸಂಘಟಿತ ಜವಳಿ ತಾಣವಾಗಿ ಮಾರ್ಪಟ್ಟಿದ್ದು, ಜವಳಿ ವ್ಯಾಪಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’ ಎಂದರು.

ಚಿತ್ರನಟಿ ಶರಣ್ಯ ಶೆಟ್ಟಿ, ‘ಬದಲಾಗುತ್ತಿರುವ ಟ್ರೆಂಡ್‌ಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಪ್ರತಿಯೊಂದು ಸಂಗ್ರಹವೂ ಅತ್ಯುತ್ತಮವಾಗಿದ್ದು, ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲಾ ರೀತಿಯ ಉಡುಪುಗಳ ಸಂಗ್ರಹವನ್ನು ಒಂದೆಡೆ ತಂದಿರುವುದರಿಂದ ವೈವಿಧ್ಯತೆ ಕಾಣಬಹುದಾಗಿದೆ’ ಎಂದರು.

ADVERTISEMENT

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ‘ಇದು ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಉತ್ಸವವಾಗಿದ್ದು, 150ಕ್ಕೂ ಹೆಚ್ಚು ಬ್ರ್ಯಾಂಡಗಳ ಉಡುಪುಗಳಿವೆ. ಮೇಳದಲ್ಲಿ ₹ 100 ಕೋಟಿಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.