ADVERTISEMENT

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಎಸ್‌ಎಸ್‌ಡಿ ಹೋರಾಟ: ಎಂ. ವೆಂಕಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:15 IST
Last Updated 24 ಸೆಪ್ಟೆಂಬರ್ 2024, 15:15 IST
ಸಮತಾ ಸೈನಿಕ ದಳ ಶತಮಾನೋತ್ಸವ ಅಂಗವಾಗಿ ನಡೆದ ಶತದಿನಗಳ ಸಂಭ್ರಮ ಅಭಿಯಾನದ ಉದ್ಘಾಟನೆ ಸಮಾರಂಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಂ. ವೆಂಕಟಸ್ವಾಮಿ, ಇಂದಿರಾ ಕೃಷ್ಣಪ್ಪ, ಬಿಕ್ಕುಣಿ ಬುದ್ಧಮ್ಮ ಭಾಗವಹಿಸಿದ್ದರು   ಪ್ರಜಾವಾಣಿ ಚಿತ್ರ 
ಸಮತಾ ಸೈನಿಕ ದಳ ಶತಮಾನೋತ್ಸವ ಅಂಗವಾಗಿ ನಡೆದ ಶತದಿನಗಳ ಸಂಭ್ರಮ ಅಭಿಯಾನದ ಉದ್ಘಾಟನೆ ಸಮಾರಂಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಂ. ವೆಂಕಟಸ್ವಾಮಿ, ಇಂದಿರಾ ಕೃಷ್ಣಪ್ಪ, ಬಿಕ್ಕುಣಿ ಬುದ್ಧಮ್ಮ ಭಾಗವಹಿಸಿದ್ದರು   ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಸಮತ ಸೈನಿಕ ದಳ(ಎಸ್‌ಎಸ್‌ಡಿ) ನಿರಂತರವಾಗಿ ಹೋರಾಟ ಮಾಡುತ್ತಿದೆ’ ಎಂದು ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಂ. ವೆಂಕಟಸ್ವಾಮಿ ಹೇಳಿದರು.

ಸಮತಾ ಸೈನಿಕ ದಳ ಶತಮಾನೋತ್ಸವದ ಅಂಗವಾಗಿ ಮಂಗಳವಾರ ನಡೆದ ‘ಶತದಿನಗಳ ಸಂಭ್ರಮ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಹೋರಾಟದ ಫಲಾನುಭವಿಗಳೆಲ್ಲರೂ ಎಸ್‌ಎಸ್‌ಡಿ ಸದಸ್ಯರಾಗಿದ್ದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನಾಪತ್ತೆ ಆಗುತ್ತಿತ್ತು. ಎಲ್ಲ ವರ್ಗದ ಯುವಕರು, ಮಹಿಳೆಯರು ಎಸ್‌ಎಸ್‌ಡಿ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ದೇಶದಲ್ಲಿ ಜಾತಿವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ಡಾ.ಬಿ.ಆರ್. ಅಂಬೇಡ್ಕರ್‌ ಅವರು 1924 ಸೆಪ್ಟೆಂಬರ್‌ 24ರಂದು ಎಸ್‌ಎಸ್‌ಡಿ ಸ್ಥಾಪಿಸಿದ್ದರು. ಇಂದಿಗೆ 100 ವರ್ಷಗಳನ್ನು ಪೂರೈಸಿರುವ ಎಸ್‌ಎಸ್‌ಡಿ ದೇಶದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದೆ’ ಎಂದರು.

’ಅಸ್ಪೃಶ್ಯತೆ ಆಚರಣೆಯ ವಿರುದ್ಧ ಎಸ್‌ಎಸ್‌ಡಿ ನಿರಂತರವಾಗಿ ಹೋರಾಟ ಮಾಡುತ್ತಿದೆ. ಮುಂಬರುವ 100 ದಿನಗಳಲ್ಲಿ ರಾಜ್ಯದಾದ್ಯಂತ 100 ಸಮತಾ ಸಮಾವೇಶಗಳನ್ನು ಆಯೋಜಿಸುವ ಮೂಲಕ ಎಸ್‌ಎಸ್‌ಡಿ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ’ ಎಂದು ಹೇಳಿದರು.

ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಆರ್‌ಪಿಐ ಸತೀಶ್, ಜಿ. ಗೋವಿಂದಯ್ಯ, ಜಿ.ಸಿ. ವೆಂಕಟರಮಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.