ADVERTISEMENT

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 4:38 IST
Last Updated 25 ಫೆಬ್ರುವರಿ 2021, 4:38 IST

ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಕ್ರೀಡಾ, ಕಲೆ, ಸಾಂಸ್ಕೃತಿಕ ಅಭಿವೃದ್ಧಿ ವೇದಿಕೆಯಿಂದ ಫೆ. 27 ಮತ್ತು 28ರಂದು ‘ಜಾತ್ರಾ ಕುಸ್ತಿ ಹಬ್ಬ’ ನಡೆಯಲಿದೆ.

ರಾಜ್ಯಮಟ್ಟದ ಪರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳಿಗೆ ಊಟ, ವಸತಿ ಸೌಲಭ್ಯ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌ 97311 18920, 76192 15881 ಸಂಪರ್ಕಿಸಬಹುದು.

ಮಧುಮೇಹ ಶಿಬಿರ

ADVERTISEMENT

ದೊಡ್ಡಬಳ್ಳಾಪುರ: ಲಯನ್ಸ್‌ ಕ್ಲಬ್‌, ಲಯನ್ಸ್‌ ಚಾರಿಟೀಸ್‌ ಟ್ರಸ್ಟ್‌, ವಸಂತ ಡಯಾಗ್ನೊಸ್ಟಿಕ್‌, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಯಿಂದ ಫೆ. 28ರಂದು ಬೆಳಿಗ್ಗೆ 7.30ರಿಂದ ನಗರದ ಲಯನ್ಸ್‌ ಭವನದಲ್ಲಿ ಉಚಿತ ಮಧುಮೇಹ ತಪಾಸಣೆ, ಮಧುಮೇಹ ರೋಗಿಗಳ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಸಮಾಲೋಚಕರಾಗಿ ಡಾ.ಮಂಗಳಾ, ಡಾ.ರಮೇಶ್‌ ಭಾಗವಹಿಸಲಿದ್ದಾರೆ ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಆರ್‌.ಎಸ್‌. ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.