ADVERTISEMENT

ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 16:06 IST
Last Updated 24 ಜನವರಿ 2026, 16:06 IST
ಎಂ.ಎಸ್.ರಾಧಾ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿದರು.  ನವೀನ್ ಕುಮಾರ್, ಡಾ.ಕೆ.ವಿ.ಮುನಿಸ್ವಾಮಿ ಉಪಸ್ಥಿತರಿದ್ದರು
ಎಂ.ಎಸ್.ರಾಧಾ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿದರು.  ನವೀನ್ ಕುಮಾರ್, ಡಾ.ಕೆ.ವಿ.ಮುನಿಸ್ವಾಮಿ ಉಪಸ್ಥಿತರಿದ್ದರು   

ಕೆ.ಆರ್.ಪುರ: ‘ಮಕ್ಕಳ ತಮ್ಮ ಮೇಲೆ ವಿಶ್ವಾಸವಿಟ್ಟು ಶ್ರಮಪಟ್ಟು ಓದಿದರೆ ಅಂದುಕೊಂಡಿದನ್ನು ಸಾಧಿಸಬಹುದು’ ಎಂದು ಕೆ.ಆರ್.ಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಎಸ್.ರಾಧಾ ಅಭಿಪ್ರಾಯಪಟ್ಟರು.

ಕೆ.ಆರ್.ಪುರದ ಶ್ರೀ ವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅತಿ ಹಿಂದುಳಿದ ವರ್ಗದ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 93 ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು.

ಶ್ರೀ ವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ.ಮುನಿಸ್ವಾಮಿ ಮಾತನಾಡಿ, ಕೆಲ ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ವರ್ಷ ₹2.95 ಲಕ್ಷವನ್ನು 93 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು.

ADVERTISEMENT

ಚಾರ್ಟರ್ಡ್ ಅಕೌಂಟೆಂಟ್ ನವೀನ್ ಕುಮಾರ್, ಕಾಲೇಜು ನಿರ್ದೇಶಕ ಪ್ರೊ.ವಿ.ಎಂ‌.ರವಿ, ಆಡಳಿತಾಧಿಕಾರಿ ಡಾ.ಪುಟ್ಟರಾಜು, ಪ್ರಾಂಶುಪಾಲ ಜಿ.ಇ.ಪ್ರಕಾಶ್, ಉಪಪ್ರಾಂಶುಪಾಲ ನಾಗಾರ್ಜುನ, ಎಚ್.ಎಂ.ಗೀತಾಂಜಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.