ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಬುಧವಾರ ಸಂಜೆ ಇಲ್ಲಿನ ಗವಿಗಂಗಾಧರೇಶ್ವರ ದೇಗುಲದ ಗರ್ಭಗುಡಿಯನ್ನು ಸೂರ್ಯ ರಶ್ಮಿಗಳು ಪ್ರವೇಶಿಸಲಿವೆ.
‘ಸೂರ್ಯರಶ್ಮಿಯು ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5.20ರಿಂದ 5.30ರ ಮಧ್ಯದಲ್ಲಿ ಒಂದು ನಿಮಿಷ ಹಾದು ಹೋಗಲಿದೆ. ಶಿವನ ವಿಗ್ರಹಕ್ಕೆ ಎಳನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಲಾಗುವುದು’ ಎಂದು ದೇಗುಲದ ತಿಳಿಸಿದೆ.‘ಈ ವರ್ಷ 2ದಿನ ತಡವಾಗಿ ಧನುರ್ಮಾಸ ಪೂಜೆ ಆರಂಭವಾಗಿದ್ದು, ಒಂದು ದಿನ ಮುಂಚಿತವಾಗಿ ಮುಗಿಯುತ್ತಿದೆ ಎಂದು ದೇಗುಲದ ಅರ್ಚಕರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.