ಯಲಹಂಕ: ದೀಪಾವಳಿ ಹಬ್ಬದ ಪ್ರಯುಕ್ತ ಬಿ.ಪ್ಯಾಕ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವತಿಯಿಂದ ಉಪನಗರದ ಬಿಬಿಎಂಪಿ ಕಚೇರಿಯ ಆವರಣದಲ್ಲಿ ಪೌರಕಾರ್ಮಿಕರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಸಿಹಿ ತಿಂಡಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ’ಇಲ್ಲಿನ 3 ಮತ್ತು 4ನೇ ವಾರ್ಡ್ ವ್ಯಾಪ್ತಿಯ 400ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಸಿಹಿ ವಿತರಿಸಲಾಗಿದೆ‘ ಎಂದು ತಿಳಿಸಿದರು.
ಬಿ.ಪ್ಯಾಕ್ ಸಂಸ್ಥೆಯ ಸಿವಿಕ್ ನಾಯಕರಾದ ಶಶಿಕಲಾ ಎಚ್., ಹೇಮಲತಾ, ಮುಖಂಡರಾದ ಎಂ.ಸತೀಶ್, ರಾಜಣ್ಣ, ಕಡತನಮಲೆ ಸತೀಶ್, ಪ್ರಕಾಶ್, ಪವನ್, ಬೃಂದಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.