ಬೆಂಗಳೂರು: ಪೀಣ್ಯ ಇಂಡಸ್ಟ್ರಿಯಲ್ ಮೆಟ್ರೊ ನಿಲ್ದಾಣದಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಮೆಟ್ರೊ ಹಸಿರು ಮಾರ್ಗದಲ್ಲಿ ಯಶವಂತಪುರದಿಂದ ನಾಗಸಂದ್ರವರೆಗೆ ರೈಲು ಸಂಚಾರ ಅರ್ಧ ಗಂಟೆ ಸ್ಥಗಿತಗೊಂಡಿತು.
ಬೆಳಿಗ್ಗೆ 10.15ಕ್ಕೆ ಸಿಗ್ನಲಿಂಗ್ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಬಿಎಂಆರ್ ಸಿಎಲ್ ತಾಂತ್ರಿಕ ಸಿಬ್ಬಂದಿ ಬಂದು 10.45ಕ್ಕೆ ಸರಿಪಡಿಸಿದರು. 10.50ರಿಂದ ಮೆಟ್ರೊ ರೈಲು ಸಂಚಾರ ಪುನರಾರಂಭಗೊಂಡಿತು.
ಈ ಅರ್ಧ ಗಂಟೆ ಅವಧಿಯಲ್ಲಿ ಮೆಟ್ರೊ ರೈಲು 6 ಟ್ರಿಪ್ಗಳನ್ನು ಯಶವಂತಪುರದಿಂದ ನಾಗಸಂದ್ರ ಕಡೆಗೆ ಸ್ಥಗಿತಗೊಳಿಸಲಾಗಿತ್ತು. ರೇಷ್ಮೆ ಸಂಸ್ಥೆಯಿಂದ ಯಶವಂತಪುರವರೆಗೆ ಶಾರ್ಟ್ಲೂಪ್ ಸೇವೆ ನೀಡಲಾಗಿತ್ತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.