ಬೆಂಗಳೂರು: ಫೇಸ್ಬುಕ್ ಜಾಹೀರಾತು ನಂಬಿ ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದ ಅರ್ಚಕರೊಬ್ಬರು ₹ 1.60 ಲಕ್ಷ ಕಳೆದುಕೊಂಡಿದ್ದಾರೆ.
ವೈಯಾಲಿಕಾವಲ್ ನಿವಾಸಿಯಾದ 42 ವರ್ಷ ವಯಸ್ಸಿನ ಅರ್ಚಕರ ದೂರು ನೀಡಿದ್ದು, ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಮಹಾಕುಂಭಮೇಳದಲ್ಲಿ ಭಾಗಿಯಾಗಲು ಫೇಸ್ಬುಕ್ನಲ್ಲಿ ಕಾರ್ತಿಕೇಯನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಹೆಸರಿನ ಜಾಹೀರಾತು ಗಮನಿಸಿ ಸಂಪರ್ಕಿಸಲಾಗಿತ್ತು. ಮೊಬೈಲ್ನಲ್ಲಿ ಮಾತನಾಡಿದ್ದ ವ್ಯಕ್ತಿ, ಟಿಕೆಟ್ ಬುಕ್ ಮಾಡುವುದಾಗಿ ಹಂತ ಹಂತವಾಗಿ ₹1.60 ಲಕ್ಷವನ್ನು ಆನ್ಲೈನ್ ಮೂಲಕ ಸ್ವೀಕರಿಸಿದ್ದ. ಹಣ ಕೈ ಸೇರಿದ ಬಳಿಕ ಟಿಕೆಟ್ ಬುಕ್ ಮಾಡಿಕೊಡದೇ ವಂಚಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.