ಬೆಂಗಳೂರು: ಬಾಡಿಗೆ ವಾಹನ ಸೇವೆ ನೀಡುವ ಉಬರ್ ಕಂಪನಿ ರಾಜ್ಯದಾದ್ಯಂತ ಮೇ 4ರಿಂದ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಸೋಮವಾರದಿಂದ (ಮೇ 4) ತನ್ನ ಸೇವೆ ಪುನರಾರಂಭಿಸಲಿದೆ.
ಲಾಕ್ಡೌನ್ ಸಂದರ್ಭದಲ್ಲಿ ಕೋವಿಡ್–19 ವಿರುದ್ಧ ಹೋರಾಡುತ್ತಿರುವ ಆರೋಗ್ಯಸೇವಾ ಕಾರ್ಯಕರ್ತರು ಮತ್ತು ಅಗತ್ಯ ಸೇವೆ ನೀಡುವ ಸಿಬ್ಬಂದಿಗೆ ಮಾತ್ರ ಸೇವೆ ನೀಡುತ್ತಿದ್ದ ಉಬರ್, ಈಗ ಕಿತ್ತಳೆ ಮತ್ತು ಹಸಿರುವ ವಲಯದಲ್ಲಿ ಈ ಮೊದಲಿನಂತೆ ಸಾರ್ವಜನಿಕರ ಸೇವೆಗೆ ವಾಹನಗಳು ಲಭ್ಯವಾಗಲಿವೆ ಎಂದು ವೆಬ್ಸೈಟ್ನಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.