ADVERTISEMENT

ಉಪಾಸನಾ ಮೋಹನ್‌ಗೆ ಗೌರಿಸುಂದರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 20:32 IST
Last Updated 1 ಜೂನ್ 2022, 20:32 IST
ಉಪಾಸನಾ ಮೋಹನ್
ಉಪಾಸನಾ ಮೋಹನ್   

ಬೆಂಗಳೂರು:ಸುಂದರ ಪ್ರಕಾಶನ ನೀಡುವ 2022ನೇ ಸಾಲಿನ ‘ಗೌರಿಸುಂದರ್' ವಾರ್ಷಿಕ ಪ್ರಶಸ್ತಿಗೆ ಸುಗಮ ಸಂಗೀತ ಕಲಾವಿದಉಪಾಸನಾ ಮೋಹನ್ ಆಯ್ಕೆ
ಆಗಿದ್ದಾರೆ.

ಪ್ರಶಸ್ತಿಯು ₹ 10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.ಕವಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಮತ್ತು ಗಾಯಕಿ ಕಸ್ತೂರಿ ಶಂಕರ್ ಅವರು ಆಯ್ಕೆ ಸಮಿತಿಯಲ್ಲಿದ್ದರು. ಇದೇ 19ರಂದು ನಗರದ ಬಿ.ಪಿ ವಾಡಿಯಾಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಂದಿರಾ ಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT