ADVERTISEMENT

ಬೆಂಗಳೂರು | ಕಲ್ಲು ಎತ್ತಿಹಾಕಿ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 15:15 IST
Last Updated 23 ಅಕ್ಟೋಬರ್ 2025, 15:15 IST
ಸಾಹಿಲ್ ಪಾಷಾ
ಸಾಹಿಲ್ ಪಾಷಾ   

ಬೆಂಗಳೂರು: ಯಲಚೇನಹಳ್ಳಿಯ ಸಿದ್ದೇಶ್ವರ ಗ್ಲಾಸ್‌ ಆ್ಯಂಡ್‌ ಪ್ಲೈವುಡ್ಸ್‌ ಅಂಗಡಿಯ ಎದುರು ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇಲಿಯಾಸ್ ನಗರದ ನಿವಾಸಿ ಸಾಹಿಲ್ ಪಾಷಾ (22) ಬಂಧಿತ ಆರೋಪಿ.

ಆರೋಪಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ADVERTISEMENT

ಕೃತ್ಯ ಎಸಗಿದ ನಾಲ್ಕು ತಾಸಿನ ಒಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸರು ಹೇಳಿದರು.

ಅಂಗಡಿಯ ಎದುರು ವ್ಯಕ್ತಿಯೊಬ್ಬರು ಮಲಗಿದ್ದರು. ಅವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಆರೋಪಿ ಪರಾರಿ ಆಗಿದ್ದ. ಮದ್ಯದ ನಶೆಯಲ್ಲಿ ಆರೋಪಿ ಕೃತ್ಯ ಎಸಗಿರುವಂತೆ ಕಂಡುಬರುತ್ತಿದೆ. ಕೊಲೆಯಾದ ಅಪರಿಚಿತ ವ್ಯಕ್ತಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.